ಯು.ಪಿ.ಎಸ್‌.ಬದಲಾಗಿ ಓ.ಪಿ.ಎಸ್‌.ಯೋಜನೆ ಜಾರಿಗೆ ಒತ್ತಾಯ

Demand for implementation of OPS scheme instead of UPS

ಯು.ಪಿ.ಎಸ್‌.ಬದಲಾಗಿ ಓ.ಪಿ.ಎಸ್‌.ಯೋಜನೆ ಜಾರಿಗೆ ಒತ್ತಾಯ 

ಕೊಪ್ಪಳ 01: ಕೇಂದ್ರ ಸರಕಾರಿ ನೌಕರರಿಗೆ ಇಂದಿನ ಜಾರಿಯಾಗಲಿರುವ ಏಕೀಕೃತ ಪಿಂಚಣಿ ವ್ಯವಸ್ಥೆ (ಯು.ಪಿ.ಎಸ್) ಯೋಜನೆಯು ಕೂಡಾ ಭವಿಷ್ಯದಲ್ಲಿ ಭದ್ರತೆ ಇಲ್ಲದ ಯೋಜನೆಯಾಗಿದೆ.ಇಂತಹ ಭದ್ರತೆ ಇಲ್ಲದ ಯು.ಪಿ.ಎಸ್‌.ಯೋಜನೆ ಬೇಡಾ ನಮಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡಬೇಕು ಎಂದು ನೂತನ ಪಿಂಚಣಿಗೆ ಒಳಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ ಚಿಲವಾಡಗಿ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.‘ ಅವರು ತಾಲೂಕಿನ ಬಹದ್ದೂಬಂಡಿ ಶಾಲೆಯಲ್ಲಿ ನೂಪೂರ ಸಂಘಟನೆಯ ಕರೆಯ ಮೆರೆಗೆ ದೇಶಾಧ್ಯಂತಹ ನೌಕರರ ತಾವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಸಮಯಲ್ಲಿ ಮಾತನಾಡುತ್ತಾ,ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯ ಬದಲಾಗಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಯಿತು.ಎನ್‌.ಪಿ.ಎಸ್‌.ಯೋಜನೆಯು ಭವಿಷ್ಯದಲ್ಲಿ ಭದ್ರತೆ ಇಲ್ಲದ ಯೋಜನೆಯಾಗಿದೆ ಎಂಬುದು ಅರ್ಥವಾದ ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅನೇಕ ಹೋರಾಟಗಳನ್ನು ಮಾಡಲಾಯಿತು. ಅದರ ಫಲವಾಗಿ ಇಂದು ಕೇಂದ್ರ ಸರಕಾರವು ಸರಕಾರಿ ನೌಕರರ ಮೂಗಿಗೆ ತುಪ್ಪ ಸವರುವ ಹಾಗೇ ಇಂದಿನಿಂದ ಕೇಂದ್ರ ಸರಕಾರವು ಏಕೀಕೃತ ಪಿಂಚಣಿ ವ್ಯವಸ್ಥೆ(ಯು.ಪಿ.ಎಸ್) ಯೋಜನೆ ಜಾರಿಗೆ ಮಾಡಲಾಗುತ್ತಿದೆ. ಯು.ಪಿ.ಎಸ್‌.ಯೋಜನೆಯೂ ಕೂಡಾ ಭವಿಷ್ಯದಲ್ಲಿ ಭದ್ರೆತೆ ಇಲ್ಲದ ಯೋಜನೆಯಾಗಿದೆ.10 ವರ್ಷ ಸೇವೆ ಮಾಡಿದ ನೌಕರರಿಗೆ 10 ಸಾವಿರ ಪಿಂಚಣಿ ನೀಡುವ ವ್ಯವಸ್ಥೆ ಯು.ಪಿ.ಎಸ್‌.ಯೋಜನೆಯಲ್ಲಿದೆ.ಆದರೆ ಪ್ರಸ್ತುತ ದಿನಮಾನಗಳಲ್ಲಿ ಅನೇಕ ಬೆಲೆಗಳು ಗಗನಕ್ಕೆರಿರುವುದರಿಂದ 10 ಸಾವಿರಗಳಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತದೆ.ಕೂಡಲೇ ಕೇಂದ್ರ ಸರಕಾರವು ಎನ್‌.ಪಿ.ಎಸ್‌.ಯೋಜನೆ ಹಾಗೂ ಯು.ಪಿ.ಎಸ್‌.ಯೋಜನೆಯ ಯಾವುದೂ ಬೇಡಾ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಅವರ ಎನ್‌.ಪಿ.ಎಸ್‌.ನೌಕರರಿಗೆ ಭದ್ರತೆಯನ್ನು ಒದಗಿಸಿ ಕೊಡವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಈ ಸಮಯದಲ್ಲಿ ಎನ್‌.ಪಿ.ಎಸ್‌.ನೌಕರರಾದ ಮಮತಾ.ಬಿ.ಕೆ.ಎಂ.,ಗಂಗಮ್ಮ ಕಪರಶೇಟ್ಟಿ,ಹನಮಂತವ್ವ,ಮೇರಾಜುನ್ನಿಸಾ,ಶಿಕ್ಷಕಿಯರಾದ ಜ್ಯೋತಿಲಕ್ಷ್ಮೀ,ಪೂರ್ಣಿಮಾ ತುಪ್ಪದ,ಹನುಮಂತಪ್ಪ ಮುಂತಾದವರು ಹಾಜರಿದ್ದರು.