ಜ.22ರವರೆಗೆ ಪ್ರತಿ ನಿತ್ಯ ದಾನಮ್ಮದೇವಿ ಮಹಾಪುರಾಣ
Danammadevi Mahapurana every day till January 22nd
ಸಿಂದಗಿ 16: ನಗರದಲ್ಲಿ ಬಾಳೆಹೊನ್ನುರ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪಾವನ ಸಾನಿಧ್ಯದಲ್ಲಿ ಸಿಂದಗಿ ಬಸ್ ಡಿಪೋ ಬಳಿ ಇರುವ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ 30ನೇ ಜಾತ್ರಾ ಮಹೋತ್ಸವದ ಅಂಗವಾಗಿ ದಾನಮ್ಮದೇವಿ ಮಹಾಪುರಾಣವನ್ನು ಜ.15 ರಿಂದ ಜ.22ರ ವರೆಗೆ ಪ್ರತಿ ನಿತ್ಯ ಸಾಯಂಕಾಲ 6:30ಗಂಟೆಗೆ ಜರುಗಲಿದೆ. ಪುರಾಣವನ್ನು ಯಂಕಂಚಿಯ ವೀರಭದ್ರಯ್ಯ ಶಾಸ್ತ್ರೀಗಳು, ಸಂಗೀತ ಸೇವೆಯನ್ನು ಕೆರೂಟಗಿಯ ರೇಣುಕ ಗವಾಯಿಗಳು, ತಬಲಾ ವಾದಕರಾಗಿ ಜೇವರ್ಗಿಯ ಮಹಾಂತೇಶ ಕಾಳಗಿ ಇರಲಿದ್ದಾರೆ ಎಂದು ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಜ.22ರಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಲ್ಲಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 10ಗಂಟೆಗೆ ಉಚಿತ ನೇತ್ರ ತಪಾಸಣೆ ಹಾಗೂ ನಾಲವಾರದ ಆದಿಶೇಷ ಸಂಸ್ಥಾನ ಹಿರೇಮಠದ ಕಾಯಕಯೋಗಿ, ಪವಾಡ ಪುರುಷ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ಜಹಗಿರದಾರ ಶ್ರೀಗಳ 55ನೇ ವರ್ಷದ ಅನುಷ್ಠಾನ ಸುಮರ್ಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಜನತೆ ಹಾಗೂ ಶ್ರೀಮಠದ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜ.23ರಂದು ಬೆಳಗಿನ ಬ್ರಾಹ್ಮೀ ಮುಹೂರ್ತದ 5ಗಂಟೆಗೆ ಆಶ್ಲೇಷ ನಾಗಪೂಜೆ, ಕುಜದೋಷ, ಕಾಳಸರ್ ದೋಷ, ಸುದರ್ಶನ ಹೋಮ ಈ ಎಲ್ಲ ದೋಷಗಳ ಪರಿಹಾರ ನೀಡಲಾಗುವುದು.
ಕುಂಭ, ಕಳಸ ವಾದ್ಯ ಮೇಳಗಳ ಮೂಲಕ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ನಡೆಯುವುದು. ಬಳಿಕ ಬೆಳಿಗ್ಗೆ 11:39ಕ್ಕೆ ಆದಿಶೇಷ ಸಂಸ್ಥಾನ ಶ್ರೀಮಠದ ಆವರಣದಲ್ಲಿ ಹರಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಹಾಗೂ ರಾಜಕಾರಣಿಗಳ ಉಪಸ್ಥಿತಿಯಲ್ಲಿ ಧರ್ಮ ಸಮಾವೇಶ ನಡೆಯಲಿದೆ. ಜ.23ರಂದು ಮುತೈದೆಯರ ಉಡಿ ತುಂಬುವ, ಅಯ್ಯಾಚಾರ, ಲಿಂಗದೀಕ್ಷೆ ಹಾಗೂ ಆದಿಶೇಷ ದೇವಸ್ಥಾನದ ನೂತನ ಶಿಲಾ ವಿನ್ಯಾಸ ಕಾರ್ಯಕ್ರಮಗಳು ಜರಗುವವು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 