ನೈಸರ್ಗಿಕ್ ವಿಜ್ಞಾನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಲು ಸಹಕಾರಿ: ಪ್ರೊ. ಅಶೋಕಕುಮಾರ
ಲೋಕದರ್ಶನ ವರದಿ
ಹಾವೇರಿ, 23: ಗಣಿತದ ಪರಿಕಲ್ಪನೆಗಳು ಮತ್ತು ಭಾಷೆಯನ್ನು ಬಳಸುತ್ತ ಗಣಿತದ ಮಾದರಿಯನ್ನು ಅಭಿವೃದ್ಧಿಪಡಿಸುವ ಕಾರ್ಯ ಯುವಪೀಳಿಗೆಯಿಂದ ಆಗಬೇಕಾಗಿದ್ದು, ಮಾದರಿ ವಿವರಣೆ, ವಿಭಿನ್ನ ಘಟಕಗಳ ಪರಿಣಾಮಗಳ ಅಧ್ಯಯನ ಕುರಿತು ವಿದ್ಯಾಥರ್ಿಗಳು ಆಸಕ್ತಿ ತೋರಬೇಕೆಂದು ಅಂಕೋಲಾದ ಗೋಖಲೆ ಸೆಂಟೆನರಿ ಕಾಲೇಜಿನ ಪ್ರೊ. ಅಶೋಕಕುಮಾರ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ "ಗಣಿತಶಾಸ್ತ್ರದ ಮಾದರಿ ಮತ್ತು ರಾಮಾನುಜಂರ ಮಾಂತ್ರಿಕ ಚೌಕ" ವಿಷಯ ಕುರಿತು ಮಾತನಾಡುತ್ತಿದ್ದರು.
ಗಣಿತಶಾಸ್ತ್ರದ ಮಾದರಿಗಳು ನೈಸಗರ್ಿಕ ವಿಜ್ಞಾನಗಳಲ್ಲಿ, ಅದರಲ್ಲೂ ವಿಶೇಷವಾಗಿ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿಯ ವ್ಯವಸ್ಥೆಯ ವಿವರಣೆಗಳ ಬಗ್ಗೆ ಬೆಳಕು ಚೆಲ್ಲಲು ಸಹಾಯಕಾರಿ.
ಈ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳು ಸಂಶೋಧನಾ ಕಾರ್ಯದಲ್ಲಿ ತೊಡಗಬೇಕೆಂದು ಕರೆ ನೀಡಿದರು.
ಶ್ರೀನಿವಾಸ ರಾಮಾನುಜಂ ಭಾರತದ ಒಬ್ಬ ಶ್ರೇಷ್ಠ ಗಣಿತಜ್ಞರಾಗಿ 'ಸಂಖ್ಯೆಗಳ ವಿಶ್ಲೇಷಣಾತ್ಮಕ ಸಿದ್ಧಾಂತಕ್ಕೆ' ಗಣನೀಯ ಕೊಡುಗೆ ನೀಡುವುದರ ಜೊತೆಗೆ ದೀರ್ಘ ವೃತ್ತದ ಕಾರ್ಯಗಳು ಮತ್ತು ಅನಂತ ಸರಣಿಗಳ ಬಗ್ಗೆ ಅವರ ಸಾಧನೆ ಅಪಾರ. ಮಾಂತ್ರಿಕ ಚೌಕದಲ್ಲಿ ಜೋಡಿಸಲಾದ ಸಂಖ್ಯೆಗಳ ಮಾದರಿಗಳು ಕಣರ್ಿಯವಾಗಿ, ಅಡ್ಡಡ್ಡಲಾಗಿ, ಲಂಬವಾಗಿ ಮತ್ತು ಹೆಚ್ಚೆಚ್ಚು ಮೂಲಗಳಲ್ಲಿ, ಕೇಂದ್ರ ಚೌಕದಲ್ಲಿ ಸೇರಿಸಿದಾಗ ಅದೇ ಮೊತ್ತವನ್ನು ಉತ್ಪತ್ತಿ ಮಾಡುತ್ತವೆ ಎಂಬುದರ ಮಹತ್ವವನ್ನು ಯುವ ಪೀಳಿಗೆ ಅರಿಯಬೇಕು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ವಹಿಸಿದ್ದರು. ಕಾರ್ಯಕ್ರಮ ಸಂಯೋಜಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ. ಜಿ. ಕೆ. ಮಂಕಣಿ ಸ್ವಾಗತಿಸಿ, ಪರಿಚಯಿಸಿದರು. ಕಿರಣಸ್ವಾಮಿ ಗುಂಡೂರಮಠ ನಿರೂಪಿಸಿದರು. ರೋಹನ ಪಾಟೀಲ ವಂದಿಸಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 