ಆಸೆ-ಆಕಾಂಕ್ಷೆಗಳ ನಿರೋಧದಿಂದ ತನು-ಮನಗಳ ನಿಯಂತ್ರಣ
Control of the mind through the inhibition of desires and aspirations
ಆಸೆ-ಆಕಾಂಕ್ಷೆಗಳ ನಿರೋಧದಿಂದ ತನು-ಮನಗಳ ನಿಯಂತ್ರಣ
ಗದಗ 4: ಇಚ್ಛೆಗಳನ್ನು ನಿಯಂತ್ರಿಸಿಕೊಂಡು ಮನುಷ್ಯ ಜನ್ಮವನ್ನು ವ್ರತನಿಯಮಾದಿಗಳ ಪಾಲನೆ ಮೂಲಕ ಸತ್ಪಲಗೊಳಿಸುವುದೇ ಉತ್ತಮ ತಪವಾಗಿದ್ದು, ಇದ್ದುದರಲ್ಲಿ ಇದ್ದದ್ದನ್ನು ಅನುಭವಿಸುವುದು ಅಂದರೆ ಸಹಜತೆಯಿಂದ ಬಾಳುವುದು ಜಾಣತನವಾಗಿದೆ ಎಂದು ಕುಮಾರಿ ರಂಜಿತಾ ಮೇಲಾಣಿ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ನಿಮಿತ್ತ ಸೊರಟೂರದ ಶಾಂತಿನಾಥ ಬಸದಿಯ ಸಭಾಭವನದಲ್ಲಿ ಆಯೋಜಿಸಿದ್ದ ‘ಉತ್ತಮ ತಪಧರ್ಮ’ ಕುರಿತು ಉಪನ್ಯಾಸ ಮಾಡುತ್ತ, ನಮ್ಮ ಶಕ್ತಿ, ಸಾಮರ್ಥ್ಯ, ಯೋಗ್ಯತೆಗಳಿಗೆ ಅನುಸಾರವಾಗಿ ಇಚ್ಛೆಗಳನ್ನು ದಮನಿಸಿ ತಪದ ಮಾರ್ಗದಲ್ಲಿ ಮುನ್ನಡೆದರೆ ತನು-ಮನಗಳ ಮೇಲೆ ನಿಯಂತ್ರಣ ಸಾಧ್ಯವೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎನ್. ಮಲ್ಲಾಡದ ಅವರು ನಮ್ಮ ನಾಡಿನ ಅನೇಕ ಮಹಾಪುರುಷರು, ಮಹನೀಯರು ಉನ್ನತೋನ್ನತವಾದ ಪದವಿಗಳಿದ್ದರೂ ಅದನ್ನು ಇಚ್ಛಿಸದೇ ತೃಣಕ್ಕೆ ಸಮಾನವೆಂದು ಭಾವಿಸಿ ಉತ್ತಮ ತಪದ ಮೂಲಕ ಇಂದಿಗೂ ಸ್ಮರಣೀಯರಾಗಿದ್ದಾರೆಂದು ಹೇಳಿದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಇಚ್ಛೆಗಳನ್ನು ನಿಯಂತ್ರಿಸಿಕೊಳ್ಳಲು ಮಹಾಪುರುಷರಷ್ಟೇ ಸಮರ್ಥರಲ್ಲ, ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ‘ಬದುಕು, ಬದುಕಲು ಬಿಡು’, ‘ಪರಸ್ಪರೋಪಗ್ರಹೋ ಜೀವಾನಂ’ ತತ್ವಗಳಿಗೆ ಬದ್ಧವಾಗಿ ಬಾಳಿದರೆ ಸಾಮಾನ್ಯರಿಂದಲೂ ಸಾಧ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯಶವಂತ ಸಿದ್ದಣ್ಣವರ, ಪ್ರಕಾಶ ಮುತ್ತಿನ, ಶಿವಪ್ಪ ಹೋಳಗಿ, ಧರ್ಮಣ್ಣ ಹೊಸೂರ, ಚಂದ್ರ್ಪ ಮಲ್ಲಾಡದ, ಹನಮಂತಪ್ಪ ಬೆಂತೂರ, ಅಭಿನಂದನ ಬೆಂತೂರ ಸೇರಿದಂತೆ ಸ್ಥಳೀಯ ಶ್ರಾವಕ-ಶ್ರಾವಿಕೆಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 