ಬೆಲೆ ಏರಿಕೆ ಮತ್ತು ನಿರುದ್ಯೋಗ ನಿವಾರಣೆ ಬಗ್ಗೆ ಚಕಾರ ಎತ್ತದ ಕೇಂದ್ರ ಬಜೆಟ್ : ಕಾಂಗ್ರೆಸ್ ವಕ್ತಾರ ಶೆಟ್ಟಿ ಟೀಕೆ
Congress spokesperson Shetty criticizes Union Budget for not addressing price rise and unemployment
ಕಾರವಾರ 01: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ದೇಶದ ಜ್ವಲಂತ ಗಳಾದ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ತಕ್ಷಣಕ್ಕೆ ನಿವಾರಿಸುವ ಯಾವುದೇ ಪರಿಹಾರ ಸೂಚಿಸದಿರುವ ಕಾರಣ ಈ ಬಜೆಟ್ ನಿರಾಶಾದಾಯಕ ಮತ್ತು ಬಡವರ ವಿರೋಧಿ ಬಜೆಟ್ ಆಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ವಕ್ತಾರ ಕೆ .ಶಂಭು ಶೆಟ್ಟಿ ಟೀಕಿಸಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವ ಭರವಸೆಗಳನ್ನು ನಾವು ಹತ್ತು ವರ್ಷಗಳಿಂದ ಕೇಳುತ್ತಾ ಬರುತಿದ್ದೇವೆ.ಆದರೆ ಇಂದಿನ ಬಜೆಟ್ ನಲ್ಲಿ ರೈತರಿಗೆ ಬೆಂಬಲ ಬೆಲೆ,ಸಾಲಮನ್ನಾ,ಮತ್ತು ನೀರಾವರಿ ಯೋಜನೆಗಳಿಗೆ ಸ್ಪಷ್ಟ ಹಾಗೂ ಪರ್ಯಾಯ ಹಣಕಾಸು ವ್ಯವಸ್ಥೆ ಕಾಣುತ್ತಿಲ್ಲ. ಯುವಕರಿಗೆ ಉದ್ಯೋಗ ದೊರಕಿಸುವ ಘೋಷಣೆ ಇದೆಯಾದರೂ ಸ್ಪಷ್ಟ ರೋಡ್ ಮ್ಯಾಪ್ ಕಾಣುತ್ತಿಲ್ಲ.
ಪರ್ಯಟನಾ ವಿಭಾಗಕ್ಕೆ ಹೆಚ್ಚು ಅನುದಾನ ಮೀಸಲಿಟ್ಟಿದ್ದರೂ ನಮ್ಮ ರಾಜ್ಯಕ್ಕೆ ಒಂದೇ ಒಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಪ್ರಸ್ತಾಪ ಇಲ್ಲ. ಕರ್ನಾಟಕ ದೇಶಕ್ಕೆ ಅತೀ ಹೆಚ್ಚು ಜಿ ಎಸ್ ಟಿ ನೀಡುವ ರಾಜ್ಯಗಳಲ್ಲಿ ಎರಡನೆಯದಾಗಿದ್ದರೂ,ಆಂಧ್ರ ಮತ್ತು ಬಿಹಾರಕ್ಕೆ ಘೋಷಣೆ ಆದಂತೆ ನಮ್ಮ ರಾಜ್ಯಕ್ಕೆ ಯಾವುದೇ ನೇರ ಪ್ಯಾಕೇಜ್ ಘೋಷಣೆ ಇಲ್ಲ. ಈ ಹಿಂದೆ ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 5600 ಕೋಟಿ ಘೋಷಣೆ ಆಗಿದ್ದರೂ ಇಲ್ಲಿವರೆಗೆ ಬಿಡಿಗಾಸೂ ಬಂದಿಲ್ಲ. ಆದ್ದರಿಂದ ಈಗ ಬಜೆಟ್ ನಲ್ಲಿ ಘೋಷಣೆ ಆದ ಅಭಿವೃದ್ಧಿಯ ಅಂಕಿ ಅಂಶ ಗಳು, ಕೊರೊನಾ ಸಮಯದಲ್ಲಿ ಕೇಂದ್ರ ಸರಕಾರ ಘೋಷಣೆ ಮಾಡಿದ್ದ 20 ಲಕ್ಷ ಕೋಟಿಯ ಅನುದಾನದಂತೆ ಕಾಣದಂತೆ ಮಾಯವಾಗದಿರಲಿ ಎಂಬುದು ಕಾಂಗ್ರೆಸ್ ಆಶಯ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಕೆ .ಶಂಭು ಶೆಟ್ಟಿ ಹೇಳಿದ್ದಾರೆ. .....
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 