ಸ್ವಚ್ಚತಾ ಸವಾರಿ ಕಾರ್ಯಕ್ರಮ

ಸ್ವಚ್ಚತಾ ಸವಾರಿ ಕಾರ್ಯಕ್ರಮ Cleanliness Ride Program


ಕಾರವಾರ, ಜ.29 : ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌, ಕರ್ನಾಟಕ ಜಿಲ್ಲಾ ಸಂಸ್ಥೆ, ಕಾರವಾರ ವತಿಯಿಂದ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ  ಗುರುವಾರ ಆಯೋಜಿಸಲಾದ ಸ್ವಚ್ಚತಾ ಸವಾರಿ ಕಾರ್ಯಕ್ರಮಕ್ಕೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಜಿಲ್ಲಾ ಪಂಚಾಯತಿಯ ಆಡಳಿತ ವಿಭಾಗದ ಉಪ ಕಾರ್ಯದರ್ಶಿ ಎಮ್‌. ಎಸ್ ಅಲ್ಲಾಬಕಷ್ ಚಾಲನೆ ನೀಡಿದರು. 

 ಬಳಿಕ  (ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ) ಸಂಸ್ಥೆಯ ಪರಿಸರ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾದ ಸ್ವಚ್ಚತಾ ಸವಾರಿಯನ್ನು ಉದ್ದೇಶಿಸಿ ಮಾತನಾಡಿ, ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಇಂದಿನ ಯುವ ಜನತೆ ಸ್ವಚ್ಚತೆಗೆ ಆದ್ಯತೆ ನೀಡಬೇಕಾದ್ದು ಅತೀ ಅವಶ್ಯಕವಾಗಿದೆ ಎಂದರು. 

ಈ ಸಂದರ್ಭದಲ್ಲಿ ಹಿರಿಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ, ಜಿಲ್ಲಾ ಪಂಚಾಯತ್ ಎಸ್‌.ಬಿ.ಐ ಸಮಾಲೋಚಕರು, ಕಾರವಾರ ನಗರ ಶಾಲೆಯ ಸ್ಕೌಟ್ಸ್‌, ಗೈಡ್ಸ್‌, ರೋವರ್ಸ್‌, ರೇಂಜರ್ಸ್‌ ಹಾಗೂ ದಳ ನಾಯಕರುಗಳು ಹಾಜರಿದ್ದು ಸ್ವಚ್ಛತಾ ಶ್ರಮದಾನವನ್ನು ಕೈಗೊಂಡರು.