ಚೆಕ್ ಡ್ಯಾಂ ಅಂತರ್ಜಲದ ಜೀವನಾಡಿ: ಲಮಾಣಿ
ಲೋಕದರ್ಶನ ವರದಿ
ಶಿರಹಟ್ಟಿ 06: ರೈತರ ಶ್ರೇಯೋಭಿವೃದ್ಧಿಗಾಗಿ, ಅವರ ಆಥರ್ಿಕ ಜೀವನ ಸುಧಾರಣೆಗಾಗಿ ಮಳೆಯ ನೀರನ್ನೇ ಅವಲಂಬಿಸದೇ ಅಂತರ್ಜಲ ಮೂಲಕ ನೀರಾವರಿ ಮಾಡಿಕೊಂಡು ಜೀವನೋಪಾಯ ಮಾಡಬಹುದಾಗಿದೆ. ಅದಕ್ಕೆ ಚೆಕ್ ಡ್ಯಾಂ ನಿಮರ್ಾಣ ಮಾಡಿದರೆ ಅಂತರ್ಜಲ ಹೆಚ್ಚಾಗಲು ಸಾಧ್ಯವಾಗುತ್ತದೆ ಅದಕ್ಕಾಗಿ ಅಂತರ್ಜಲದ ಬಲವರ್ದನೆಗಾಗಿ ಚಕ್ ಡ್ಯಾಂ ಜೀವನಾಡಿಯಾಗಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ತಾಲೂಕಿನ ಹೆಬ್ಬಾಳ ಗ್ರಾಮದ ಹತ್ತಿರದ ಹಳ್ಳದಲ್ಲಿ ಎಸ್ಸಿಪಿ ಯೋಜನೆಯಡಿಯಲ್ಲಿ 40 ಲಕ್ಷ ಮೊತ್ತದ ಚಕ್ ಡ್ಯಾಂ ನಿಮರ್ಾಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
ತಾಲೂಕನಲ್ಲಿ ನೀರಾವರಿ ಕ್ಷೇತ್ರವನ್ನಾಗಿಸುವುದಕ್ಕಾಗಿ ಚಕ್ ಡ್ಯಾಂ ನಿಮರ್ಾಣ, ತುಂಗಭದ್ರಾ ನದಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದುಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಮುಂದಿನ ದಿನಮಾನದಲ್ಲಿ ರೈತರ ಹಿತ ಕಾಯುವುದಕ್ಕಾಗಿ ಸರ್ವ ಪ್ರಯತ್ನವನ್ನು ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವನಗೌಡ ಕಂಠಿಗೌಡ್ರ, ಶರಣಪ್ಪ ಬಾರಕೇರ, ಪ್ರಕಾಶಗೌಡ ತೆಗ್ಗಿನಮನಿ, ಮಹೇಶಗೌಡ ತೆಗ್ಗಿನಮನಿ, ಚನ್ನವೀರಪ್ಪ ತೆಗ್ಗಿನಮನಿ, ಎಫ್.ಎಸ್.ಕಾಶೀಮಠ. ವೀರಣ್ಣ ಹಳ್ಳದ ಮಂತಾದವರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 