ಚಂದ್ರಶೇಖರ್ ತಾಳ್ಯ ಅವರಿಗೆ ಡಾ.ಪಂಡಿತಾರಾಧ್ಯ ಶ್ರೀಗಳ ಅಭಿನಂದನೆ
ಲೋಕದರ್ಶನ ವರದಿ
ಸಾಣೇಹಳ್ಳಿ29: ನಿನ್ನೆ ಸರಕಾರ ಬಿಡುಗಡೆಗೊಳಿಸಿದ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ನೋಡಿದೆವು. ಅವರಲ್ಲಿ ಅನೇಕರು ಪ್ರಚಾರ ಬಯಸದೆ ಎಲೆಮರೆಯ ಕಾಯಂತೆ ಕೆಲಸ ನಿರ್ವಹಿಸುತ್ತಿರುವವರು. ಅವರನ್ನು ಗುರುತಿಸಿ ಪ್ರಶಸ್ತಿ ನೀಡಿರುವ ಸರಕಾರದ ನಡೆ ಅಭಿನಂದನೀಯ. ಅವರಲ್ಲಿ ಚಂದ್ರಶೇಖರ್ ತಾಳ್ಯ ಅವರು ಸಿರಿಗೆರೆಯಲ್ಲಿ ಪದವಿ ಮತ್ತು ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಓದುವಾಗ ನಮ್ಮ ಸಹಪಾಠಿಗಳಾಗಿದ್ದರು. ವಿದ್ಯಾಥರ್ಿ ದೆಸೆಯಿಂದಲೇ ಪ್ರತಿಭಾವಂತರೆಂದು ಗುರುತಿಸಿಕೊಂಡಿದ್ದರು. ಮುಂದೆ ಅವರು ನಮ್ಮ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ತರ್ಕಶಾಸ್ತ್ರದ ಉಪನ್ಯಾಸಕರಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ತಾಳ್ಯ ಅವರು ಉತ್ತಮ ವಾಗ್ಮಿಗಳಾಗಿರುವಂತೆ ಲೇಖಕರು, ವಿಮರ್ಶಕರು, ನಾಟಕಕಾರರು ಮತ್ತು ಕವಿಗಳೂ ಹೌದು. ಅವರಿಗೆ ಬಹಳ ಹಿಂದೆಯೇ ರಾಜ್ಯೋತ್ಸವ ಪ್ರಶಸ್ತಿ ಸಲ್ಲಬೇಕಿತ್ತು. ಅದು ಈಗಲಾದರೂ ಸಂದಿರುವುದು ನಮಗೆ ಸಂತೋಷ ತಂದಿದೆ. ತಾಳ್ಯ ಅವರಿಗೆ ಅಭಿನಂದನೆಗಳು ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 