ಚಂದ್ರಶೇಖರ್ ಪಾಟೀಲ್ ಕೋಡಿಹಳ್ಳಿ ರೈತ ಸಂಘದ ಅಧ್ಯಕ್ಷರಾಗಿ ನೇಮಕ

ಚಂದ್ರಶೇಖರ್ ಪಾಟೀಲ್ ಕೋಡಿಹಳ್ಳಿ   ರೈತ ಸಂಘದ ಅಧ್ಯಕ್ಷರಾಗಿ  ನೇಮಕ Chandrashekhar Patil appointed as President of Kodihalli Farmers' Association


ರಾಣೇಬೆನ್ನೂರು   27:  ತಾಲೂಕಿನ ಕೂನಬೇವು  ಗ್ರಾಮದ ಪ್ರಗತಿಪರ ರೈತ, ಕವಿ ಚಂದ್ರಶೇಖರ ಎಸ್‌. ಪಾಟೀಲ   ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಾಗೂ ಹಸಿರು ಸೇನೆ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ನೇಮಕಾತಿ ಗೊಳಿಸಿದ್ದಾರೆ.  

 ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ, ಅವರು ಇತ್ತೀಚಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ  ನೇಮಕಾತಿ ಆದೇಶ ಪತ್ರವನ್ನು  ವಿತರಿಸಿ ತಮ್ಮಿಂದ  ಬಹು ನೀರೀಕ್ಷೆಯ, ರೈತ ಪರ ಸಂಘಟನೆಯನ್ನು ಮಾಡುತ್ತಾರೆಂದು ಆಶಿಸಿದ್ದೇನೆ ಎಂದು ರಾಜ್ಯಾಧ್ಯಕ್ಷರು ಮತ್ತು ಅವರ ಪದಾಧಿಕಾರಿಗಳು   ಅಧ್ಯಕ್ಷರಾಗಿ ನೇಮಕಗೊಂಡಿರುವ ಚಂದ್ರಶೇಖರ್ ಪಾಟೀಲ್ ಅವರಿಗೆ ಅಭಿನಂದಿಸಿದ್ದಾರೆ. ನೂತನ ಅಧ್ಯಕ್ಷ ಚಠು ಅವರಿಗೆ ರೈತರ, ಕನ್ನಡಪರ, ಸಾಮಾಜಿಕ ಚಿಂತನಾಪರ, ಅನೇಕ ಸಂಘ ಸಂಸ್ಥೆಗಳು ಗಣ್ಯರು ಹಾರ್ದಿಕವಾಗಿ ಶುಭಕೋರಿದ್ದಾರೆ.