ಸಂಭ್ರಮದ ಕಾತರ್ಿಕ ದೀಪೋತ್ಸವ
ಲೋಕದರ್ಶನ ವರದಿ
ಗುತ್ತಲ14: ಸಮೀಪದ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಸಂಜೆ ಕಾತರ್ಿಕ ದೀಪೋತ್ಸವ ಜರುಗಿತು.
ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿದ್ದ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮನುಷ್ಯನಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಆತನಲ್ಲಿ ಜ್ಞಾನದ ಬೆಳಕನ್ನು ಮೂಡಿಸುವ ಸಂಕೇತವಾಗಿಯೇ ಕಾತರ್ಿಕೋತ್ಸವ ಆಚರಣೆ ಮಾಡಲಾಗುತ್ತಿದೆ. ದೀಪ ಬೆಳಗುವಾಗ ನಮ್ಮಲ್ಲಿರುವ ಅಂಧಕಾರತ್ವ ತೊಲಗಿ ಜ್ಞಾನದ ಬೆಳಕು ಮೂಡಲಿ ಎಂದು ಸಂಕಲ್ಪ ಮಾಡಿ ದೀಪವನ್ನು ಹಚ್ಚಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಸಮಾರಂಭದಲ್ಲಿ ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮುಖಂಡರಾದ ಕುಮಾರ ಮಾಹೂರ ಅಮರ ಗಂಗನಗೌಡ್ರ ಕುರುವತ್ತೆಪ್ಪ ಹೊಸಮನಿ ಗಂಗಣ್ಣ ದಂಡಗಿನಹಳ್ಳಿ. ಶಿವರೆಡ್ದಿಮೈದೂರ ನಾಗಪ್ಪ ಕಟ್ಟೆಣ್ಣನವರ ಮಾಲತೇಶ ಬಾಯಣ್ಣನವರ ಕುಮಾರ ಹುಲೇಪ್ಪನವರ ಮೃತ್ಯುಂಜಯ ಹುಚ್ಚಬಸಪ್ಪನವರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಸದ್ಬಕ್ತರು ಉಪಸ್ಥಿತರಿದ್ದರು. ಗದಿಗಯ್ಯಸ್ವಾಮಿ ಹಿರೇಮಠ ಸ್ವಾಗತಿಸಿನಿರೂಪಿಸಿದರು.
ಮನ ತಣಿಸಿದ ಸಿಡಿಮದ್ದಿನ ಪ್ರದರ್ಶನ
ಕಾತರ್ಿಕ ದೀಪ ಬೆಳಗುತ್ತಿದ್ದಂತೆ ಇತ್ತ ಚಿತ್ರ ಚಿತ್ರ ತಮಾಷಾ ಸಿಡಿ ಮದ್ದಿನ ಸದ್ದು ಮಾಡುತ್ತಾ ಹೋದರೆ ಇತ್ತ ನೆರೆದ ಭಕ್ತ ಸಮೂಹದ ಹಷ್ಗರ್ೂದ್ಧಾರ ಮುಗಿಲು ಮುಟ್ಟುವಂತಿತ್ತು. ರಾಕೆಟ್ ಬಾಣ ಪಟಾಕಿ ಆಕಾಶಕ್ಕೆ ಹಾರಿ ಬೆಳಕು ಚಲ್ಲಿದರೆ ನೋಡಗರ ಮನಸೆಳೆದು ಕುಣಿದು ಕುಪ್ಪಳಿಸುವಂತೆ ಮಾಡಿತು.
ನೆಗಳೂರ ಗುರುಶಾಂತೇಶ್ವರ ಹಿರೇಮಠದಲ್ಲಿ ಗುರುವಾರ ಜರುಗಿದಕಾತರ್ಿಕ ದೀಪೋತ್ಸಕ್ಕೆ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗಿಸಿದರು. ಮಠಾಧ್ಯಕ್ಷ ಗುರುಶಾಂತೇಶ್ವರ ಶಿವಾಚಾರ್ಯರು ಇದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 