ಸಂಭ್ರಮದ ಕಾತರ್ಿಕ ದೀಪೋತ್ಸವ
ಲೋಕದರ್ಶನ ವರದಿ
ಗುತ್ತಲ14: ಸಮೀಪದ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಸಂಜೆ ಕಾತರ್ಿಕ ದೀಪೋತ್ಸವ ಜರುಗಿತು.
ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿದ್ದ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮನುಷ್ಯನಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಆತನಲ್ಲಿ ಜ್ಞಾನದ ಬೆಳಕನ್ನು ಮೂಡಿಸುವ ಸಂಕೇತವಾಗಿಯೇ ಕಾತರ್ಿಕೋತ್ಸವ ಆಚರಣೆ ಮಾಡಲಾಗುತ್ತಿದೆ. ದೀಪ ಬೆಳಗುವಾಗ ನಮ್ಮಲ್ಲಿರುವ ಅಂಧಕಾರತ್ವ ತೊಲಗಿ ಜ್ಞಾನದ ಬೆಳಕು ಮೂಡಲಿ ಎಂದು ಸಂಕಲ್ಪ ಮಾಡಿ ದೀಪವನ್ನು ಹಚ್ಚಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಸಮಾರಂಭದಲ್ಲಿ ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮುಖಂಡರಾದ ಕುಮಾರ ಮಾಹೂರ ಅಮರ ಗಂಗನಗೌಡ್ರ ಕುರುವತ್ತೆಪ್ಪ ಹೊಸಮನಿ ಗಂಗಣ್ಣ ದಂಡಗಿನಹಳ್ಳಿ. ಶಿವರೆಡ್ದಿಮೈದೂರ ನಾಗಪ್ಪ ಕಟ್ಟೆಣ್ಣನವರ ಮಾಲತೇಶ ಬಾಯಣ್ಣನವರ ಕುಮಾರ ಹುಲೇಪ್ಪನವರ ಮೃತ್ಯುಂಜಯ ಹುಚ್ಚಬಸಪ್ಪನವರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಸದ್ಬಕ್ತರು ಉಪಸ್ಥಿತರಿದ್ದರು. ಗದಿಗಯ್ಯಸ್ವಾಮಿ ಹಿರೇಮಠ ಸ್ವಾಗತಿಸಿನಿರೂಪಿಸಿದರು.
ಮನ ತಣಿಸಿದ ಸಿಡಿಮದ್ದಿನ ಪ್ರದರ್ಶನ
ಕಾತರ್ಿಕ ದೀಪ ಬೆಳಗುತ್ತಿದ್ದಂತೆ ಇತ್ತ ಚಿತ್ರ ಚಿತ್ರ ತಮಾಷಾ ಸಿಡಿ ಮದ್ದಿನ ಸದ್ದು ಮಾಡುತ್ತಾ ಹೋದರೆ ಇತ್ತ ನೆರೆದ ಭಕ್ತ ಸಮೂಹದ ಹಷ್ಗರ್ೂದ್ಧಾರ ಮುಗಿಲು ಮುಟ್ಟುವಂತಿತ್ತು. ರಾಕೆಟ್ ಬಾಣ ಪಟಾಕಿ ಆಕಾಶಕ್ಕೆ ಹಾರಿ ಬೆಳಕು ಚಲ್ಲಿದರೆ ನೋಡಗರ ಮನಸೆಳೆದು ಕುಣಿದು ಕುಪ್ಪಳಿಸುವಂತೆ ಮಾಡಿತು.
ನೆಗಳೂರ ಗುರುಶಾಂತೇಶ್ವರ ಹಿರೇಮಠದಲ್ಲಿ ಗುರುವಾರ ಜರುಗಿದಕಾತರ್ಿಕ ದೀಪೋತ್ಸಕ್ಕೆ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗಿಸಿದರು. ಮಠಾಧ್ಯಕ್ಷ ಗುರುಶಾಂತೇಶ್ವರ ಶಿವಾಚಾರ್ಯರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 