ಕೆನರಾ ಬ್ಯಾಂಕ್‌ನಿಂದ ಯಲ್ಲಮ್ಮನ ಗುಡ್ಡದಲ್ಲಿ ಮಜ್ಜಿಗೆ ವಿತರಣೆ

ಕೆನರಾ ಬ್ಯಾಂಕ್‌ನಿಂದ ಯಲ್ಲಮ್ಮನ ಗುಡ್ಡದಲ್ಲಿ ಮಜ್ಜಿಗೆ ವಿತರಣೆ Canara Bank distributes buttermilk in Yellammana Gudda


ಉಗರಗೋಳ 06: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಕೆನರಾ ಬ್ಯಾಂಕ್ ಯಲ್ಲಮ್ಮನ ಗುಡ್ಡ ಶಾಖೆಯ ವತಿಯಂದ ಶುಕ್ರವಾರ ರೂ. 50 ಸಾವಿರ ಮೌಲ್ಯದ ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಯಿತು. 

ಮಜ್ಜಿಗೆ ಪ್ಯಾಕೆಟ್ ವಿತರಿಸಿದ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪೂರ ಮಾತನಾಡಿ ಬಿಸಿಲಿನ ಬೇಗೆಯಿಂದ ಬಳಲುವ ಭಕ್ತರ ದಾಹ ನೀಗಿಸಲು ಮಜ್ಜಿಗೆ ವಿತರಿಸಿದ ಬ್ಯಾಂಕ್‌ನವರ ಕಾರ್ಯ ಶ್ಲಾಘನಿಯ ಎಂದರು. 

ಎಮ್ ಶ್ರೀವಿಧ್ಯಾ, ಪ್ರಶಾಂತ ಗೋಡಕೆ, ಮಂಜುನಾಥ ಅಂಗಡಿ, ಚಾನಾಕ್ಷ ನವಲಕರ, ಮಲ್ಲು ಜಕಾತಿ, ಸಂಗಮೇಶ ಮೀರಕೊರ, ಸುಭಾಸ ಪಾಟೀಲ, ತಾಪೀಪ್ ಪೀರಜಾದೆ, ಮಂಜುನಾಥ ಆಡಕರ, ಮಲ್ಲಪ್ಪ ದರೂರ, ಮುತ್ತುರಾಜಮಾತನವರ, ಮಹೇಶ ಸಿಂಗಪಾಂಗಾ ಬ್ಯಾಂಕ್ ಸಿಬ್ಬಂದಿ ಇದ್ದರು.