ಸಿಎಂ ಸಿದ್ದುಗೆ ಶಾಸಕ ಹಿಟ್ನಾಳ ರಿಂದ ಸನ್ಮಾನ

ಸಿಎಂ ಸಿದ್ದುಗೆ ಶಾಸಕ ಹಿಟ್ನಾಳ ರಿಂದ ಸನ್ಮಾನ CM Sidhu felicitated by MLA Hitnal

ಸಿಎಂ ಸಿದ್ದುಗೆ ಶಾಸಕ ಹಿಟ್ನಾಳ ರಿಂದ ಸನ್ಮಾನ

ಕೊಪ್ಪಳ 29:  ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಮಂಡಳಿ ಬಳ್ಳಾರಿ ಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು, ಸದರಿ ಬಳ್ಳಾರಿ ಹಾಲು ಉತ್ಪಾದಕರ ಮಂಡಳಿ ಯಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಲು ಮತ್ತು ಹಾಲು ಉತ್ಪಾದಕರಿಗೆ ಸರ್ಕಾರದಿಂದ ಸಿಗಬಹುದಾದ ಸಹಾಯ ಧನ ಒದಗಿಸಿ ಕೊಡುವ ನಿಟ್ಟಿನಲ್ಲಿ ಮತ್ತು ಮಂಡಳಿಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲು ತನಗೆ ನೀಡಿರುವ ಅವಕಾಶಕ್ಕಾಗಿ ಅಭಿನಂದಿಸಿದ ಅವರು ತಮ್ಮ ಮಾರ್ಗದರ್ಶನದಲ್ಲಿ ಹಾಲು ಉತ್ಪಾದಕರ ಮತ್ತು ರೈತರ ಹಿತ ಕಾಪಾಡುವುದರ ಜೊತೆಗೆ ಮಂಡಳಿಯ ಸರ್ವಾಂಗಿಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಮತ್ತು ನನಗೆ ನೀಡಿರುವ ಜವಾಬ್ದಾರಿ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಕೊಪ್ಪಳದ ಶಾಸಕ ಹಾಗೂ ಬಳ್ಳಾರಿ ಹಾಲು ಉತ್ಪಾದಕರ ಸಹಕಾರಿ ಮಂಡಳಿಯ ನೂತನ ಅಧ್ಯಕ್ಷ ಕೆ ರಾಘವೇಂದ್ರ ಹಿಟ್ನಾಳ ರವರು ಹೇಳಿ ,ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶೀರ್ವಾದ ಪಡೆದುಕೊಂಡರು.