ವಿದ್ಯಾರ್ಥಿಗಳಿಗೆ ಬಸ್ಸಿನ ಅವ್ಯವಸ್ಥೆ

ವಿದ್ಯಾರ್ಥಿಗಳಿಗೆ ಬಸ್ಸಿನ ಅವ್ಯವಸ್ಥೆ  Bus chaos for students

ಯಮಕನಮರಡಿ, 12 : ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಹಿಡಕಲ್ ಡ್ಯಾಂ ಮಾರ್ಗವಾಗಿ ಜಿನರಾಳ ಹುನ್ನೂರ ಆರಿ​‍್ಸ. ಲೇಬರ್ ಕ್ಯಾಂಪ್ ಸುಮಾರು 50 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರತಿದಿನ ಕಾಲೇಜಿಗೆ ಬರುತ್ತಿದ್ದು ಆದರೆ ಹಿಡಕಲ್ ಡ್ಯಾಂ ನಿಂದ ಆಗಮಿಸುವ ಬಸ್ ಕೇವಲ ದಾದಬಾನಹಟ್ಟಿ ವರೆಗೆ ಮಾತ್ರ ಸಂಚರಿಸುತ್ತಿದೆ. ಇದರಿಂದ ಯಮಕನಮರಡಿಯಲ್ಲಿ ಇರುವ ಕಾಲೇಜಿಗೆ ಮಕ್ಕಳು ನಡೆದುಕೊಂಡು ಹಾಗೂ ಮುಂಬರುವ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ವ್ಯವಸ್ಥೆಯಲ್ಲಿದಾಗ ಖಾಸಗಿ ವಾಹನಕ್ಕೆ ಹತ್ತುವಾಗ ಈಗಾಗಲೇ ಅನಾಹುತಗಳು ಆಗಿದ್ದು ಆ ವಿಷಯವು ತಮ್ಮ ಗಮನಕ್ಕೆ ಬಂದಿರುತ್ತವೆ ಆದ್ದರಿಂದ ತಾವು ಬಸ್ಸಿನ ವ್ಯವಸ್ಥೆ ಮಾಡಬೇಕು.  

ಸರಿಯಾದ ಕಾಲೇಜಿನ ವೇಳೆಗೆ ಬಂದು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತತ್ತಿಲ್ಲ. ಕಾಲೇಜಿನ ಅವದಿಯು ಮುಂಜಾನೆ 10:00 ರಿಂದ ಸಾಯಂಕಾಲ 4:00 ಗಂಟೆ ವರೆಗೆ ಇದ್ದು ಈ ಸಮಯದಲ್ಲಿ ಹಿಡಕಲ್ ಡ್ಯಾಂ ನಿಂದ ಬರುವ ಬಸ್ಸು ಯಮಕನಮರಡಿ ಗ್ರಾಮ ಪಂಚಾಯತಿ ವರೆಗೆ ಬಂದು ಹೋದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ.  ಈ ಕಾರಣದಿಂದ ಕೆ.ಎಸ್‌.ಆರಿ​‍್ಟ.ಸಿ ವ್ಯವಸ್ಥಾಪಕರು ಕೂಡಲೇ ಕ್ರಮವಹಿಸುವಂತೆ ಯಮಕನಮರಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕೋರಿದ್ದಾರೆ.