ಜನೇವರಿ 25, ರವಿವಾರ ದಂದು ಬೆಸ್ಟ್ ಟ್ಯಾಲೆಂಟ್ ಏಕ್ಸಾಮ್ - 2026
Best Talent Exam on Sunday, January 25 - 2026
ತಾಳಿಕೋಟಿ 23: ಪಟ್ಟಣದ ಶ್ರೀ.ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಬೆಸ್ಟ್ ಪಿ.ಯು ಸೈನ್ಸ್ ಕಾಲೇಜು ಹಾಗೂ ಭವಿತಾ ನೀಟ್ ಅಕಾಡಮಿ ಬೆಂಗಳೂರು ಇವರ ವತಿಯಿಂದ ಜನೇವರಿ 25 ರವಿವಾರ ದಂದು ಬೆಸ್ಟ್ ಟ್ಯಾಲೆಂಟ್ ಏಕ್ಸಾಮ್ 2026ರ ಸ್ಕಾಲರ್ಶಿಪ್ ಪರೀಕ್ಷೆಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಮುಖ್ಯಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ್ ಅವರು ತಿಳಿಸಿದರು. ಭವಿತಾನೀಟ್ ಅಕಾಡಮಿಬೆಂಗಳೂರು ಇದರ ಸಂಸ್ಥಾಪಕರಾದ ಶ್ರೀದತ್ತಾತ್ರೇಯ ಅವರು ಮಾತನಾಡಿ ಈ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ಹಾಗೂ ತೃತಿಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತಶಿಕ್ಷಣ ನೀಡಲಾಗುವುದು ಮತ್ತು 4 ರಿಂದ 10 ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 75ಅ ಕಾಲೇಜು ಫೀಯಲ್ಲಿ ಹಾಗೂ 11 ರಿಂದ 20 ನೇಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 50ಅ ಕಾಲೇಜು ಫೀಯಲ್ಲಿ, ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಶ್ರೀ. ಘನಮಠೇಶ್ವರ ಆಂಗ್ಲ ಮಾದ್ಯಮ ಫ್ರೌಡಶಾಲೆಯ ಪ್ರಾಂಶುಪಾಲರಾದ ಬಸವರಾಜ ಸಜ್ಜನ್ ರವರು ಮಾತನಾಡಿ ಈ ಬಾರಿಎಸ್.ಎಸ್. ಎಲ್.ಸಿಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳು ಬೆಸ್ಟ್ ಟ್ಯಾಲೆಂಟ್ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 