ಬಳ್ಳಾರಿ: ಬಾಲಕಿಯರ ಶಿಕ್ಷಣ ಸಮಾಜಕ್ಕೆ ಆಶಾ ಕಿರಣ
ಲೋಕದರ್ಶನ ವರದಿ
ಬಳ್ಳಾರಿ 10: ಸಮಾಜದ ಜನರ ನೋವಿಗೆ ಸ್ಪಂಧಿಸುವ ಮನುಸು ಕೊಡುವ ಶಿಕ್ಷಣ ನಿಮ್ಮದಾಗಲಿ ಎಂದು ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತಡಿದರು.ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಾಲಕಿಯರಿಗೆ ಶಿಕ್ಷಣ ನೀಡಿದರೆ ಮಾನವ ಸಂಪನ್ಮೂಲದ ಅರ್ಧಭಾಗ ಅಭಿವೃದ್ಧಿ ಹೊಂದಿದಂತೆ. ಅದಕ್ಕಾಗಿಬಾಲಕಿಯರ ಕಾಲೇಜಿಗೆ ಎಲ್ಲಾ ವಿಧದ ಸೌಲಭ್ಯಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಈಗಾಗಲೆ ಮೂರು ಕೋಟಿಯಲ್ಲಿ 36 ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ,20 ಲಕ್ಷದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ, ಅದೇ ರೀತಿ ಶುದ್ಧ ಕುಡಿಯುವ ನೀರಿಗಾಗಿ 20 ಲಕ್ಷ ರೂಪಾಯಿಗಳಲ್ಲಿ ಆರ್.ಓ ನಿರ್ಮಿಸಲಾಗುತ್ತಿದೆ, ಈ ವéರ್ಷ 1900 ವಿದ್ಯಾರ್ಥಿಗಳು ದಾಖಲಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಬಾಲಕಿಯರ ಪಿಯುಸಿಗೆ ತಮ್ಮ ಶಿಕ್ಷಣ ಮೊಟಕುಗೊಳಿಸದೆ, ಉನ್ನತ ಶಿಕ್ಷಣಕ್ಕೆ ಹೋಗಿ ಉತ್ತಮ ನೌಕರಿ ಪಡೆದು ಕುಟುಂಬಕ್ಕೆ ಹಾಸರೆ ಆಗುವುದಲ್ಲದೆ,ಸಮಾಜಕ್ಕೆ ಬೆನ್ನೇಲಬಾಗಲು ಕರೆನೀಡಿದರು.
ಅದ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಪ್ರಾಚಾರ್ಯರಾದ ಕೆ.ಎಂ. ಮಹಾಲಿಂಗನ ಗೌಡ ಇವರು ಶಿಕ್ಷಣ ಬಡತನ, ಅಜ್ಞಾನ ಹೋಗಲಾಡಿಸಲು ಅಸ್ತ್ರ ಮಾಡಿಕೊಂಡು ಸಮಾಜದ ಸಮತೆಗೆ ಕಾರಣರಾಗಲು ಕರೆ ನೀಡಿದರು. ಉಪನ್ಯಾಸಕರುಗಳಾದ ಡಾ.ಯು.ಶ್ರಿನಿವಾಸ ಮೂತರ್ಿ, ಪ್ರಾಸ್ತಾವಿಕ ಮಾತುಗಳಾಡಿದರು, ಶ್ಯಾಮಣ್ಣ ವಂದಿಸಿದರು, ಚಾಂದ ಪಾಷ ನಿರೂಪಿಸಿದರು ಶಶಿಧರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 