ಭಕ್ತಿ, ಭಾವ ಸಾಗರದ ನಡುವೆ ಬಸವೇಶ್ವರ ರಥೋತ್ಸವ

ಭಕ್ತಿ, ಭಾವ ಸಾಗರದ ನಡುವೆ ಬಸವೇಶ್ವರ ರಥೋತ್ಸವ Basaveshwara Chariot Festival amidst an ocean of devotion and emotion


ನೇಸರಗಿ 23: . ಇಲ್ಲಿನ ಸಮೀಪದ  ಮೇಕಲಮರಡಿ ಗ್ರಾಮದ ಬಸವೇಶ್ವರ ರಥೋತ್ಸವ ಭಕ್ತಿ, ಭಾವ ಸಾಗರದ ನಡುವೆ ಅದ್ಧೂರಿಯಾಗಿ ಜರುಗಿತು. ಪ್ರತಿ ವರ್ಷ ಪದ್ಧತಿಯಂತೆ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರದಂದು ಮುಂಜಾನೆ  ಮಹಾ ಅಭಿಷೇಕ, ಪಲ್ಲಕ್ಕಿ ಉತ್ಸವ  ಹಾಗೂ ಕುಂಭ ಮೆರವಣಿಗೆ ನಡೆಯಿತು ಹಾಗೂ ಮಧ್ಯಾಹ್ನ ಮಹಾಪ್ರಸಾದ ಹಾಗೂ ಸಾಯಂಕಾಲ 4:00 ಘಂಟೆಗೆ  ಮಹಾ ರಥೋತ್ಸವವನ್ನು ಸಕಲ ವಾದ್ಯ ಮೇಳಗಳೊಂದಿಗೆ ಹಾಗೂ ಮಹಾ ರಥೋತ್ಸವದ ಚಾಲನೆಯನ್ನು ಹಣರಹಟ್ಟಿಯ ಹಿರೇಮಠದ  ಷ, ಬ್ರ, ಬಸವಲಿಂಗ ಶಿವಾಚಾರ್ಯರು, ಪರಮಪೂಜ್ಯ ರಾಜಗುರು ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಇವರಿಂದ  ಚಾಲನೆ ನೀಡಿ ಭಕ್ತರಿಂದ ಹರ ಹರ ಮಹದೇವ ಎಂದು ಜೈಕಾರದಿಂದ ಅದ್ದೂರಿಯಾಗಿ ಜರುಗಿತು.