ಉತ್ತರ ಕರ್ನಾಟಕ-1ಕ್ಕೆ ಶಂಕರ ತತ್ವ ಪ್ರಸಾರಕರಾಗಿ ಬಿ.ಕೆ.ಬಿ.ಎನ್‌.ಮೂರ್ತಿ

ಉತ್ತರ ಕರ್ನಾಟಕ-1ಕ್ಕೆ ಶಂಕರ ತತ್ವ ಪ್ರಸಾರಕರಾಗಿ ಬಿ.ಕೆ.ಬಿ.ಎನ್‌.ಮೂರ್ತಿ B.K.B.N. Murthy as Shankara Tatva Broadcaster for Uttara Karnataka-1

ಬಳ್ಳಾರಿ 12:  ಶೃಂಗೇರಿಯಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ ಶಾಂಕರ ತತ್ವ ಪ್ರಸಾರ ಅಭಿಯಾನ ಸಭಾ ಮಾಹಿತಿಯಂತೆ ಇಲ್ಲಿನ ಸಂಗನಕಲ್ಲು ರಸ್ತೆ ಶ್ರೀ ಶಂಕರಮಠದ ಬಿ.ಕೆ.ಬಿ.ಎನ್‌.ಮೂರ್ತಿ ಅವರನ್ನು ಉತ್ತರ ಕರ್ನಾಟಕ ವಿಭಾಗ-1ಕ್ಕೆ ಪ್ರಸಾರಕರನ್ನಾಗಿ ನಿಯೋಜಿಸಲಾಗಿದೆ. ಶೃಂಗೇರಿಯಲ್ಲಿ ರಾಜ್ಯಮಟ್ಟದ ಶಾಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕರಾದ ಸೋಮಯ್ಯಜಿ ಹಾಗೂ ದತ್ತಪ್ಪ ಮಹಾಸ್ವಾಮಿಗಳ ನೇತೃತ್ವದಲ್ಲಿವಿಧಿವತ್ತಾಗಿ ಜರುಗಿದ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಶ್ರೀ ಆದಿ ಶಂಕರಾಚಾರ್ಯರ ತತ್ವಗಳನ್ನು ಸಾಮಾನ್ಯ ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕುರಿತುವಿಶೇಷವಾಗಿ ಚರ್ಚೆ ನಡೆಸಲಾಯಿತು.ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಕಾರ್ಯ ಚಟುವಟಿಕೆಗಳನ್ನು ಸಂಘಟಿತವಾಗಿ ನಡೆಸುವಂತೆ ತೀರ್ಮಾನಿಸಲಾಯಿತು. ಅದರಂತೆ ಉತ್ತರ ಕರ್ನಾಟಕ ವಿಭಾಗ-1ಕ್ಕೆ ಬಿ.ಕೆ.ಬಿ.ಎನ್‌. ಮೂರ್ತಿ ಇವರನ್ನು ಕಾರ್ಯಪ್ರವರ್ತರಾಗುವಂತೆ ಸೂಚಿಸಲಾಗಿ ಅದರ ಸಂಬಂಧಿತ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 


Public Awareness Organized Discussion Division-wise Activity Responsibility Assignment