ದಾಂಡೇಲಿಯಲ್ಲಿ ಗಾಂಜಾ ಮಾರುವವರ , ಸೇದುವವರ ವಿರುದ್ದ ಸಮರ ಜಾಗ್ರತಿ ಕಾರ್ಯಕ್ರಮ
Awareness program against marijuana sellers and smokers in Dandeli
ದಾಂಡೇಲಿ - ಮಾ. 3 : ದಾಂಡೇಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿ ಮತ್ತು ಯುವಜನರಲ್ಲಿ ಗಾಂಜಾ ಘಮಲು ಹಿಗಂಭೀರ ಸಾಮಾಜಿಕ ಆತಂಕವನ್ನು ತಂದೊಡ್ಡಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿರುವದು ಶಿಕ್ಷಣವಲಯ ಹಾಗೂ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಪೂರ್ಣ ಅರಿವು ಇಲ್ಲದ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ಸ್ನೇಹ ಬಳಗ ಪ್ರಭಾವ, ಕುತೂಹಲ ಅಥವಾ ಒತ್ತಡದಿಂದ ಗಾಂಜಾ ಮತ್ತಿತರ ಅಮಲು ಪದಾರ್ಥಗಳತ್ತ ಆಕರ್ಷಿತರಾಗುತ್ತಿದ್ದಾರೆ. ಸ್ಥಳೀಯ ಪೋಲಿಸ್ ಇಲಾಖೆ ಗಾಂಜಾ ಮಾರುವವರ ವಿರುದ್ದ, ಸೇದುವವರ ವಿರುದ್ದ ಸಮರವನ್ನೇ ಸಾರಿದ್ದು ಹಲವಾರು ಪ್ರಕರಣಗಳನ್ನು ಎನ್.ಡಿ.ಪಿ.ಎಸ್ ಕಾಯಿದೆಯಡಿ ದಾಖಲಿಸಿದ್ದಾರೆ.
ದಾಂಡೇಲಿ ಉಪ ವಲಯದ ಬಹುತೇಕ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವದು ಗಮನಾರ್ಹ ಜೊತೆಗೆ ಶಾಲಾ ಕಾಲೇಜುಗಳ ಮಟ್ಟದಲ್ಲಿ ಮಾದಕ ವಸ್ತುಗಳ ವಿರುದ್ದ ಜಾಗ್ರತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆದರೂ ವಿದ್ಯಾರ್ಥಿಗಳು, ಯುವಜನರು ಈ ವ್ಯಸನಕ್ಕೆ ತುತ್ತಾಗಿರುವದನ್ನು ಕಾಣಬಹುದು ಯುವಜನರು ದೇಶದ ಭವಿಷ್ಯ. ಗಾಂಜಾ ಘಮಲು- ತಾತ್ಕಾಲಿಕ ಮೋಜು ಎಂದು ಭಾವಿಸಿದರೂ, ಅದು ಭವಿಷ್ಯವನ್ನು ಹಾಳು ಮಾಡುವ ಅಪಾಯಕಾರಿ ಮಾರ್ಗವಾಗಿದೆ.ಕಳ್ಳ ದಂಧೆಯಲ್ಲಿ ಗಾಂಜಾ ಮಾರುವವರನ್ನು ಪೋಲಿಸರು ಹೆಡೆಮುರಿ ಕಟ್ಟಲು ಸತತ ಪರಿಶ್ರಮ ನಡೆಸಿದ್ದರೂ ಪೋಲಿಸರನ್ನೇ ಯಾಮಾರಿಸಿ ದಂಧೆ ನಡೆಸಿದ್ದಾರೆನ್ನಲಾಗಿದೆ. ಜಿಲ್ಲೆಯಾದ್ಯಂತ ಈ ಜಾಲ ಹರಡಿ ಎನ್ನುವ ಮಾಹಿತಿ ಇದೆ. ಪೋಲಿಸ್ ಇಲಾಖೆ ಅಲ್ಲಲ್ಲಿ ಹಿಡಿದು ಎನ್.ಡಿ.ಪಿ.ಎಸ್. ಕಾಯಿದೆಯಡಿ ಪ್ರಕರಣ ದಾಖಲಿಸುತ್ತಲೇ ಇದೆ. ದೇಶದಲ್ಲಿ ಗಾಂಜಾ ಬೆಳೆಸುವದು, ಮಾರಾಟ ಮಾಡುವದು ಮತ್ತು ಬಳಕೆ ಮಾಡುವದು ಅಪರಾಧವಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 