ಅಧುನಿಕ ಬ್ಯಾಂಕಿಂಗ್ ಸೇವೆಗಳ ಜಾಗೃತಿ ಅಭಿಯಾನ

ಅಧುನಿಕ ಬ್ಯಾಂಕಿಂಗ್ ಸೇವೆಗಳ  ಜಾಗೃತಿ ಅಭಿಯಾನ Awareness campaign on modern banking services

ಗದಗ  29: ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಣಗಿನಹಾಳ ಗ್ರಾಮದಲ್ಲಿ ಅಧುನಿಕ ಬ್ಯಾಂಕಿಂಗ್ ಸೇವೆಗಳ ಕುರಿತು ಜಾಗೃತಿ ಅಭಿಯಾನವನ್ನು ನೆಡಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಡೆಟಿಟ್ ಕಾರ್ಡ, ಕ್ರೆಡಿಟ್ ಕಾರ್ಡ, ಬ್ಯಾಂಕ್ ಲಾಕರ್, ಲೋನ್ ಸಲಹೆ, ಇಂಟರ್‌ನೆಟ್ ಬ್ಯಾಂಕಿಂಗ್, ಇ-ಕಾಮರ್ಸ, ಸೈಬರ್ ಸೆಕ್ಯೂರಿಟಿ, ಎಐ ಬ್ಯಾಂಕಿಂಗ್ ಸರ್ವಿಸ್ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರೊ. ಶ್ವೇತಾ ರಾಚಯ್ಯನವರ, ಪ್ರೊ. ಗೌರ ಯಳಮಲಿ ಉಪಸ್ಥಿತರಿದ್ದರು.