ವಿಜಯಪುರದಲ್ಲಿ ವೃಕ್ಷಥಾನ್ ರಂಗುರಂಗಿನ ಸಾಂಸ್ಕೃತಿಕ ಓಟದಲ್ಲಿ ಕಲಾತಂಡಗಳು
Art groups participate in the colorful cultural run of Vrikshathan in Vijayapura
ವಿಜಯಪುರ 01: ವೃಕ್ಷಥಾನ್ ರಂಗುರಂಗಿನ ಸಾಂಸ್ಕೃತಿಕ ಓಟ, ಇದು ಬರಿ ಓಟವಲ್ಲ- ಸಂಸ್ಕೃತಿಯ ಅನಾವರಣ. ಓಟಗಾರರಿಗೆ ಸ್ಪೂರ್ತಿ ತುಂಬಲು ಮಾರ್ಗದಲ್ಲಿ ಕಲಾ ತಂಡಗಳ ನಿಯೋಜನೆ
1. ಡಾ. ಬಿ. ಆರ್. ಅಂಬೇಡ್ಕರ್ ಒಳ ಆವರಣ- ವೃಕ್ಷಥಾನ ವತಿಯಿಂದ ಪುಣೆಯ ಆಸ್ಟಿನ್ ಅವರಿಂದ ಜುಂಬಾ ಡ್ಯಾನ್ಸ್.
2. ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದ ಓಟದ ಪ್ರಾರಂಭಿಕ ಸ್ಥಳ- ಉದ್ಯಮಿ ಅನಿಲ ಧಾರವಾಡಕರ ಹಾಗೂ ಶ್ರೀಕಾಂತ ಮಂತ್ರಿ ಅವರ ವತಿಯಿಂದ ಇಬ್ಬರು ಕಲಾವಿದರಿಂದ ಕಹಳೆ ವಾದನ ಮತ್ತು ಕಾಖಂಡಕಿಯ 8 ಕಲಾವಿದರಿಂದ ಕರಡಿ ಮಜಲ್.
3. ಕನಕದಾಸ ವೃತ್ತ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 14 ಕಲಾವಿದರಿಂದ ಗೊಂಬೆ ಕುಣಿತ.
4. ಆಸಾರ ಮಹಲ್ ಮುಂಭಾಗ- ಮಹಿಳಾ ವಿಶ್ವವಿದ್ಯಾಲಯ ವತಿಯಿಂದ ವಿವಿಯ 40 ವಿದ್ಯಾರ್ಥಿನಿಯರಿಂದ ಬ್ಯಾಂಡ್ ವಾದನ.
5. ದರ್ಬಾರ ಹೈಸ್ಕೂಲ್ ಮೈದಾನದ ಮುಂಭಾಗ- ಪರಿಸರ ಪ್ರೇಮಿ ಸನ್ನಿ ಗವಿಮಠ ವತಿಯಿಂದ 14 ಯುವತಿಯರಿಂದ ಚಿಯರ್ ಅಪ್ ನೃತ್ಯ.
6. ಕಲ್ಯಾಣಶೆಟ್ಟಿ ವೃತ್ತ(ಗೋಳಗುಮ್ಮಟ ರಸ್ತೆ)- ಶೋಭಾ ನರ್ಸಿಂಗ್ ಹೋಂ, ಡಾ. ಶಂಕರಗೌಡ ಪಾಟೀಲ ವತಿಯಿಂದ 10 ಜನರ ತಂಡದಿಂದ ತಾಶಾ(ಬ್ಯಾಂಜೋ) ವಾದನ.
7. ಗೋಳಗುಮ್ಮಟ ಆವರಣ- ಮಾಜಿ ಉಪಮೇಯರ್ ದಿನೇಶ ಹಳ್ಳಿ ಅವರ ವತಿಯಿಂದ ಕೇರಳದ 35 ಜನ ಮಹಿಳಾ ಕಲಾವಿದರಿಂದ ಫ್ಲವರ್ ಡ್ಯಾನ್, ಮೈಲಾರಲಿಂಗೇಶ್ವರ ಕೊರವ ಕುಣಿತ, ಹಾಗೂ ಶೃಂಗಾರ ನೃತ್ಯ.
8. ಬಸವೇಶ್ವರ ವೃತ್ತ- ಅರುಣ ಹುಂಡೆಕಾರ ಅವರ ಸ್ಪೂರ್ತಿ ಫೌಂಡೇಶನ್ ವತಿಯಿಂದ ಖಾನಾಪುರ ಎಸ್. ಕೆ. ಶ್ರೀ ಹೆಬ್ಬಳ್ಳೆಮ್ಮಾ ಗೊಂಬೆ ಕುಣಿತ ತಂಡ ಮತ್ತು ಕೊಣ್ಣೂರಿನ ರಾಯಣ್ಣ ಮಹಿಳಾ ಡೊಳ್ಳಿನ ಕಲಾ ತಂಡಗಳಿಂದ ಪ್ರದರ್ಶನ.
9. ಗಾಂಧಿವೃತ್ತ- ಡಾ. ಪ್ರಭುಗೌಡ ಪಾಟೀಲ ಅವರ ಅನುಗೃಹ ಆಸ್ಪತ್ರೆ ವತಿಯಿಂದ ಶಿರಸಿಯ ಸ್ಮಾರ್ಟ್ ಡ್ಯಾನ್ಸ್ ಅಕಾಡೆಮಿಯ 10 ಕಲಾವಿದರಿಂದ ಚಿಯರ್ ಅಪ್ ನೃತ್ಯ.
10. ಶಿವಾಜಿ ಚೌಕ್- ಶ್ರೀರಾಮನವಮಿ ಉತ್ಸವ ಸಮಿತಿ (ಉಮೇಶ ವಂದಾಲ) ಅವರ ವತಿಯಿಂದ ಆರು ಕಲಾವಿದರಿಂದ ಹಲಗೆವಾದನ.
11. ವಾಟರ್ ಟ್ಯಾಂಕ್- ಎಪಿ ಗ್ರುಪ್ ನ ವತಿಯಿಂದ 10 ಕಲಾವಿದರಿಂದ ಚೀಯರ್ ಅಪ್ ನೃತ್ಯ.
12. ಇಬ್ರಾಹಿಂ ರೋಜಾ ಮುಂಭಾಗ- ಈದ್ಗಾ ಸಮಿತಿ ವತಿಯಿಂದ ಹಂಸ ಧ್ವನಿ 8 ಕಲಾವಿದರಿಂದ ಗಿಟಾರ್ ವಾದನ ಮತ್ತು ದೇಶಭಕ್ತಿ ಗೀತೆ.
13. ಸೈನಿಕ ಶಾಲೆಯ ಆವರಣ- ಸೈನಿಕ ಶಾಲೆಯ ವತಿಯಿಂದ ದೇಶ ಭಕ್ತಿ ಗೀತೆ ಧ್ವನಿ ಸುರುಳಿ.
14. ಸವಿ ವಾಟರ್ ಸರ್ಕಲ್ (ಬಿ.ಎಂ.ಪಾಟೀಲ ರಸ್ತೆ)- ಸೋಮು ಜೇವೂರ ಅವರ ಸವಿ ವಾಟರ್ ಗ್ರುಪ್ ವತಿಯಿಂದ 10 ಕಲಾವಿದರಿಂದ ಬ್ಯಾಂಜೊ ವಾದನ ಮತ್ತು ಪುಷ್ಪಗಳ ಮೂಲಕ ಚಿಯರ್ ಅಪ್.
15. ಬಂಜಾರಾ ಕ್ರಾಸ್- ಬಾಬಾ ಸ್ಟಿಲ್ ಮತ್ತು ಓಂ ಟ್ರೇಡರ್ ಬಾಬು ಚವ್ಹಾಣ ಅವರ ವತಿಯಿಂದ 14 ಕಲಾವಿದರಿಂದ ಬಂಜಾರಾ ನೃತ್ಯ ಪ್ರದರ್ಶನ.
16. ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು ಆವರಣ (ಬಿ.ಎಂ.ಪಾಟೀಲ ರಸ್ತೆ)-10 ಜನ ಬಿ.ಎಲ್.ಡಿ.ಇ ವೈದ್ಯಕೀಯ ವಿದ್ಯಾರ್ಥಿಗಳಿಂದ ಚಿಯರ್ ಅಪ್ ನೃತ್ಯ ಹಾಗೂ ರಂಗೋಲಿ.
17. ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜು ಮುಂಭಾಗ- ಹ್ಯಾಪಿಕೇಕ್ ತುಷಾರ್ ಗ್ರುಪ್ ನಿಂದ ಡಿಜೆ ಸೌಂಡ್.
18. ಜ್ಞಾನ ಯೋಗಾಶ್ರಮದ ಆವರಣ- ಜ್ಞಾನಯೋಗಾಶ್ರಮದಿಂದ ಸಂತನೆಂದರೆ ಯಾರು ಧ್ವನಿ ಸುರುಳಿ ಪ್ರಸಾರ.
19. ಶ್ರೀ ಸಿದ್ದೇಶ್ವರ ಪೆಟ್ರೋಲಿಯಂ(ಬಿ.ಎಲ್.ಡಿ.ಇ ರಸ್ತೆ)- ಸಚೀನ ಕಲ್ಲೂರ ವತಿಯಿಂದ 6 ಕಲಾವಿದರಿಂದ ನವಿಲು ಕುಣಿತ.
20. ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣ- ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ವತಿಯಿಂದ 10 ಕಲಾವಿದರಿಂದ ಡೊಳ್ಳು ಕುಣಿತ.
21. ಬಾರಾ ಕಮಾನ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 5 ಕಲಾವಿದರಿಂದ ಕೊಳಲು ವಾದನ.
ಈ ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ, ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ಸೋಮು ಮಠ, ಅಮಿತ ಬಿರಾದಾರ ಹಾಗೂ ವೃಕ್ಷಥಾನ್ ನೋಂದಣಿ ಸಮಿತಿಯ ವಿನಯ ಕಂಚ್ಯಾಣಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 