ಕಾರವಾರ ಜೈಲ್ ನಲ್ಲಿ ಸಿಬ್ಬಂದಿ ಮತ್ತು ಖೈದಿಗಳ ಮಧ್ಯೆ ವಾಗ್ವಾದ: ಸ್ಥಳಾಂತರಕ್ಕೆ ಡಿಐಜಿಗೆ ಪತ್ರ - ಎಸ್ಪಿ
Argument between staff and prisoners in Karwar Jail: Letter to DIG for transfer - SP
ಕಾರವಾರ 10: ಕಾರವಾರ ಜೈಲ್ ನಲ್ಲಿ ಸಿಬ್ಬಂದಿ ಮತ್ತು ಖೈದಿಗಳ ಮಧ್ಯೆ ವಾಗ್ವಾದ ನಡೆದಿದ್ದು, ಗಲಾಟೆ ಮಾಡಿದ ವಿಚಾರಣಾಧೀನ ಖೈದಿಗಳ ಸ್ಥಳಾಂತರಕ್ಕೆ ಕಾರಾಗೃಹವ ಡಿಐಜಿಗೆ ಪತ್ರ ಬರೆಯಲಾಗಿದೆ ಎಂದು ಉ.ಕ.ಜಿಲ್ಲಾ ಎಸ್ಪಿ ದೀಪನ್ ತಿಳಿಸಿದ್ದಾರೆ .ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಂಗಳವಾರ ರಾತ್ರಿ ಮೂವರು ವಿಚಾರಣಾಧೀನ ಖೈದಿಗಳ ಮಧ್ಯೆ ವಾಗ್ವಾದ ನಡೆದಿದೆ. ಯಾವುದೇ ಹಲ್ಲೆ ಘಟನೆ ಆಗಿಲ್ಲ ಎಂದರು. ರಾತ್ರಿ ನಗರಠಾಣೆಗೆ ಜೈಲಿನಿಂದ ಪೋನ್ ಬಂದಿದೆ . ತಕ್ಷಣ ಪೊಲೀಸರು ಧಾವಿಸಿದ್ದಾರೆ. ಗಲಾಟೆ ಮಾಡಿದ ಮೂವರು ಮಂಗಳೂರು ಮೂಲದವರು. ವಾರದ ಹಿಂದೆ ಜೈಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಇಬ್ಬರ ಸಹಚರರು.
ನಿನ್ನೆ ಗಲಾಟೆ ಮಾಡಿದವರಲ್ಲಿ ಇಬ್ಬರ ಮೇಲೆ ಎನ್ ಡಿಪಿಎಸ್ ಮಾಧಕವಸ್ತು ಸೇವನೆ ಕೇಸ್ ಇದೆ. ಒಬ್ಬನ ಮೇಲೆ 307 ಕೇಸ್ ಇದೆ. ಜೈಲಿನಲ್ಲಿ ಸಿಬ್ಬ ಕೊರತೆ ಇದೆ. ಖೈದಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಗಲಾಟೆ ಮಾಡುವ ಖೈದಿಗಳ ಸ್ಥಳಾಂತರಕ್ಕೆ ಪತ್ರ ಬರೆಯಲಾಗಿದೆ ಎಂದು ಎಸ್ಪಿ ದೀಪನ್ ವಿವರಿಸಿದರು. ಕಾರಾಗೃಹಕ್ಕೆ ಡಿವೈಎಸ್ಪಿ ಗೀರೀಶ್ ಭೇಟಿ ಕೊಟ್ಟಿದ್ದಾರೆ. ಅಲ್ಲಿ ನಡೆದ ಘಟನೆ ಬಗ್ಗೆ ಪ್ರಕರಣ ದಾಖಲಾಗಲಿದೆ ಎಂದರು. ಈಚೆಗೆ ಮೂರು ತಿಂಗಳ ಹಿಂದೆ ಮಂಗಳೂರು ಜೈಲ್ ನಿಂದ ಗಲಾಟೆ ಮಾಡಿದ ಕಾರಣಕ್ಕೆ ಕಾರವಾರ ಕಾರಾಗೃಹಕ್ಕೆ ಏಳು ಜನ ವಿಚಾರಣಾಧೀನ ಖೈದಿಗಳನ್ನು ಸ್ಥಳಾಂತರಿಸಲಾಗಿತ್ತು ಎಂದು ಎಸ್ಪಿ ದೀಪನ್ ಹೇಳಿದರು. ಆದರೆ ಕಾರವಾರ ಕೇಂದ್ರ ಕಾರಾಗೃಹದಲ್ಲಿ ಸಹ ಗಲಾಟೆ ಮಾಡಿದ ಇವರನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆ ಇದೆ.ಈ ಬಗ್ಗೆ ಕಾರಾಗೃಹ ವಿಭಾಗದ ಡಿಐಜಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದು ಅವರು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 