ಕಾರವಾರ ಜೈಲ್ ನಲ್ಲಿ ಸಿಬ್ಬಂದಿ ಮತ್ತು ಖೈದಿಗಳ ಮಧ್ಯೆ ವಾಗ್ವಾದ: ಸ್ಥಳಾಂತರಕ್ಕೆ ಡಿಐಜಿಗೆ ಪತ್ರ - ಎಸ್ಪಿ
Argument between staff and prisoners in Karwar Jail: Letter to DIG for transfer - SP
ಕಾರವಾರ 10: ಕಾರವಾರ ಜೈಲ್ ನಲ್ಲಿ ಸಿಬ್ಬಂದಿ ಮತ್ತು ಖೈದಿಗಳ ಮಧ್ಯೆ ವಾಗ್ವಾದ ನಡೆದಿದ್ದು, ಗಲಾಟೆ ಮಾಡಿದ ವಿಚಾರಣಾಧೀನ ಖೈದಿಗಳ ಸ್ಥಳಾಂತರಕ್ಕೆ ಕಾರಾಗೃಹವ ಡಿಐಜಿಗೆ ಪತ್ರ ಬರೆಯಲಾಗಿದೆ ಎಂದು ಉ.ಕ.ಜಿಲ್ಲಾ ಎಸ್ಪಿ ದೀಪನ್ ತಿಳಿಸಿದ್ದಾರೆ .ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಂಗಳವಾರ ರಾತ್ರಿ ಮೂವರು ವಿಚಾರಣಾಧೀನ ಖೈದಿಗಳ ಮಧ್ಯೆ ವಾಗ್ವಾದ ನಡೆದಿದೆ. ಯಾವುದೇ ಹಲ್ಲೆ ಘಟನೆ ಆಗಿಲ್ಲ ಎಂದರು. ರಾತ್ರಿ ನಗರಠಾಣೆಗೆ ಜೈಲಿನಿಂದ ಪೋನ್ ಬಂದಿದೆ . ತಕ್ಷಣ ಪೊಲೀಸರು ಧಾವಿಸಿದ್ದಾರೆ. ಗಲಾಟೆ ಮಾಡಿದ ಮೂವರು ಮಂಗಳೂರು ಮೂಲದವರು. ವಾರದ ಹಿಂದೆ ಜೈಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಇಬ್ಬರ ಸಹಚರರು.
ನಿನ್ನೆ ಗಲಾಟೆ ಮಾಡಿದವರಲ್ಲಿ ಇಬ್ಬರ ಮೇಲೆ ಎನ್ ಡಿಪಿಎಸ್ ಮಾಧಕವಸ್ತು ಸೇವನೆ ಕೇಸ್ ಇದೆ. ಒಬ್ಬನ ಮೇಲೆ 307 ಕೇಸ್ ಇದೆ. ಜೈಲಿನಲ್ಲಿ ಸಿಬ್ಬ ಕೊರತೆ ಇದೆ. ಖೈದಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಗಲಾಟೆ ಮಾಡುವ ಖೈದಿಗಳ ಸ್ಥಳಾಂತರಕ್ಕೆ ಪತ್ರ ಬರೆಯಲಾಗಿದೆ ಎಂದು ಎಸ್ಪಿ ದೀಪನ್ ವಿವರಿಸಿದರು. ಕಾರಾಗೃಹಕ್ಕೆ ಡಿವೈಎಸ್ಪಿ ಗೀರೀಶ್ ಭೇಟಿ ಕೊಟ್ಟಿದ್ದಾರೆ. ಅಲ್ಲಿ ನಡೆದ ಘಟನೆ ಬಗ್ಗೆ ಪ್ರಕರಣ ದಾಖಲಾಗಲಿದೆ ಎಂದರು. ಈಚೆಗೆ ಮೂರು ತಿಂಗಳ ಹಿಂದೆ ಮಂಗಳೂರು ಜೈಲ್ ನಿಂದ ಗಲಾಟೆ ಮಾಡಿದ ಕಾರಣಕ್ಕೆ ಕಾರವಾರ ಕಾರಾಗೃಹಕ್ಕೆ ಏಳು ಜನ ವಿಚಾರಣಾಧೀನ ಖೈದಿಗಳನ್ನು ಸ್ಥಳಾಂತರಿಸಲಾಗಿತ್ತು ಎಂದು ಎಸ್ಪಿ ದೀಪನ್ ಹೇಳಿದರು. ಆದರೆ ಕಾರವಾರ ಕೇಂದ್ರ ಕಾರಾಗೃಹದಲ್ಲಿ ಸಹ ಗಲಾಟೆ ಮಾಡಿದ ಇವರನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆ ಇದೆ.ಈ ಬಗ್ಗೆ ಕಾರಾಗೃಹ ವಿಭಾಗದ ಡಿಐಜಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದು ಅವರು ಹೇಳಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 