ಬಸ್ ಸೌಕರ್ಯ ಒದಗಿಸಲು ಅಂಬೇಡ್ಕರ್ ಸೇನೆ ಮನವಿ
Ambedkar Sena appeals to provide bus facilities
ತಾಳಿಕೋಟಿ: ಪಟ್ಟಣದಿಂದ ಮುದ್ದೇಬಿಹಾಳ ಮಾರ್ಗಕ್ಕೆ ರಾತ್ರಿ ಏಳು ಗಂಟೆಯ ನಂತರ ರಾತ್ರಿ 9 ರವರೆಗೆ ಯಾವುದೇ ಬಸ್ ಸೇವೆ ಇಲ್ಲದ ಕಾರಣ ರಾತ್ರಿ 9:00 ನಂತರ ಹೋಗಲು ಮಹಿಳೆಯರಿಗೆ ಸಾರ್ವಜನಿಕರಿಗೆ ವೃದ್ಧರಿಗೆ ತೊಂದರೆಯಾಗುತ್ತಿದ್ದು ರಾತ್ರಿ ವೇಳೆ ಎಂಟು ಗಂಟೆಗೆ ಮುದ್ದೇಬಿಹಾಳ ಮಾರ್ಗಕ್ಕೆ ಒಂದು ಬಸ್ಸನ್ನು ಬೀಡಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ತಾಲೂಕ ಘಟಕದ ಪದಾಧಿಕಾರಿಗಳು ಶನಿವಾರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಬಸ್ ನಿಲ್ದಾಣದ ಒಳಗಿನ ಸಿಸಿ ರಸ್ತೆ ತುಂಬಾ ಹಾಳಾಗಿ ತೆಗ್ಗು ಬಿದ್ದಿರುವುದರಿಂದ ಗಲೀಜು ನೀರು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಮತ್ತು ವಾಹನಗಳು ಓಡಾಡಲು ಅನಾನಕೂಲವಾಗುವ ಕಾರಣ ಗುಣಮಟ್ಟದ ರಸ್ತೆ ಮಾಡಬೇಕೆಂದು ಕೇಳಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷಬಸ್ಸು ಈ ಮಾದರ, ಅಂಬೇಡ್ಕರ್ ಸೇನೆ ತಾಳಿಕೋಟೆ ತಾಲೂಕಾಧ್ಯಕ್ಷ ಗೋಪಾಲ ಕಟ್ಟಿಮನಿ, ತಾಲೂಕ ಖಜಾಂಚಿ ಪರಶುರಾ ತಳವಾರ, ಶಿವಪುರ ಗ್ರಾಮ ಘಟಕದ ಅಧ್ಯಕ್ಷ ಯಮನಪ್ಪ ನಾಯ್ಕೋಡಿ, ಆಸಿಫ್ ಕೆಂಭಾವಿ, ಭುವನ್ ಅಂಬಿಗೇರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 