ಬಲ್ಡೋಟ ಬೇಡ ಮುಖ್ಯಮಂತ್ರಿಗಳ ಮುಂದೆ ಸರ್ವ ಪಕ್ಷಗಳ ನಿಯೋಗ: ಸಂಗಣ್ಣ ಕರಡಿ
All-party delegation to meet Chief Minister, no need for slander: Sanganna Karadi
ಕೊಪ್ಪಳ 01: ನಗರಸಭೆ ಆವರಣದಲ್ಲಿ ನಡೆದಿರುವ ಬಲ್ಡೋಟ ತೊಲಗಿಸಿ ಹೋರಾಟದ122ನೇ ದಿನದ ಧರಣಿಯಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಾರ್ಖಾನೆ ಬಾಧೆಗೊಳಗಾದ ಜನರ ಕಷ್ಟ ಕಾರ್ಪಣಯ ಹೇಳತೀರದು. ತಂತ್ರಜ್ಞರ ವರದಿ ಹೇಳಿದ್ದನ್ನು ಜಾರಿ ಮಾಡಿ ಎಂದು ಕೇಳೋಣ. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಸಮಯ ಈಗ ಬಂದಿದೆ. ಜನಜಾಗೃತಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಬಂದ್ ಹೋರಾಟದಲ್ಲಿ ಮಹಿಳೆಯರು ತೋರಿಸಿದ ಆವೇಶ ಸಾತ್ವಿಕವಾಗಿತ್ತು. ಅವರ ನೋವಿಗೆ ಪಕ್ಷಾತೀತವಾಗಿ ಮಿಡಿದು ನಾವೆಲ್ಲ ಮುಂದೆ ನಿಂತು ಸರ್ಕಾರದ ಮನವೊಲಿಸಿ ಈ ಬಲ್ಡೋಟ ತೊಲಗಿಸೋಣ. ಜನರು ಎದ್ದು ನಿಂತರೆ ಎಂತಹ ದೊಡ್ಡ ಸಮಸ್ಯೆಯಾದರೂ ಪರಿಹಾರ ಸಿಗುತ್ತದೆ. ಇತ್ತೀಚಿಗೆ ದೇವನಹಳ್ಳಿ ಭೂಸ್ವಾಧೀನ ವಿರೋಧಿಸಿದ ಹೋರಾಟ ಗೆದ್ದಿತು. ಮುಖ್ಯಮಂತ್ರಿಗಳ ಗಮನಕ್ಕೆ ಈಗಾಗಲೇ ತರಲಾಗಿದೆ.
ಇದನ್ನು ಅಷ್ಟಕ್ಕೆ ಬಿಡಲ್ಲ. ಸದ್ಯದಲ್ಲೇ ಸರ್ವ ಪಕ್ಷಗಳ ಮುಖಂಡರು ಮತ್ತು ಜಂಟಿ ಕ್ರಿಯಾ ವೇದಿಕೆ ಮುಖಂಡರು ಇರುವ ನಿಯೋಗವನ್ನು ಕೊಂಡೊಯ್ದು ಮುಖ್ಯಮಂತ್ರಿಗಳಲ್ಲಿ ಸ್ಪಷ್ಟವಾಗಿ ಮನವಿ ಮಾಡೋಣ ಎಂದರು. ಅದಕ್ಕಿಂತ ಪೂರ್ವದಲ್ಲಿ ಜಿಲ್ಲಾಧಿಕಾರಿಗಳು ಸಭೆ ಕರೆಯುವಂತೆ ಮಾಡೋಣ ಎಂದರು. ಈಗ ಪರಿಸರ ಇಲಾಖೆಯಿಂದ ಕಾರ್ಖಾನೆಗಳ ಸುತ್ತ ಮುತ್ತ ಮಾಲಿನ್ಯ ಅಳೆಯುವ ಕೆಲಸ ನಡೆಯುತ್ತಿದೆ. ಹಳ್ಳಿಯ ಜನರು ತಮ್ಮ ಸಿಟ್ಟು ಹೊರಹಾಕಿ ಸರ್ಕಾರ ಗಮನ ಸೆಳೆದರು. ಆದಾಗ್ಯೂ ಮುಂದಿನ ಹಂತದಲ್ಲಿ ನಾವೇ ಬಾಧಿತ ಹಳ್ಳಿಯ ಜನರೊಂದಿಗೆ ಕುಳಿತು ಈ ಸಮಸ್ಯೆ ಬಗೆಹರಿಸಿಕೊಳ್ಳೋಣ. ಮುಕ್ತ ಮನಸ್ಸಿನಿಂದ ಮುಂದೆ ಬನ್ನಿ ಎಂದರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗುರುಮೂರ್ತಿ ಸ್ವಾಮಿ ಅಳವಂಡಿ ಮಾತನಾಡಿ, ಇದು ನಮ್ಮ ರಾಜಕಾರಣಿಗಳಿಗೆ ದೊಡ್ಡ ವಿಷಯವಲ್ಲ. ಇಷ್ಟು ಸಮಸ್ಯೆ ಎದುರಿಸಿ ಕಾರ್ಖಾನೆ ಮಾಲೀಕರನ್ನು ಬೆಳೆಸಿ, ನಮ್ಮ ಜನರು ರೋಗಬಾಧೆ, ಜೀವ ಸಂಕಟ ಯಾಕೆ ತೆಗೆದುಕೊಳ್ಳಬೇಕು. ಪಕ್ಷಾತೀತವಾಗಿ ರಾಜಕೀಯ ಮುಖಂಡರು ಕೂಡಿ ಕಾರ್ಖಾನೆ ತೊಲಗಿಸಿ, ಜನರ ಆರೋಗ್ಯ ಕಾಪಾಡಿರಿ ಎಂದರು.
ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಹೋರಾಟಕ್ಕೆ ಜನರು ಮತ್ತಷ್ಟು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬರಬೇಕು. ಈ ಹೋರಾಟ ಗೆಲುವು ಅಂದರೆ ನಮ್ಮ ಜೀವದ ಉಳಿವು. ಮುಂದಿನ ಭವಿಷ್ಯದ ಉಳಿವು ಎಂದರು. ಧರಣಿಗೆ ಇಪ್ಪತ್ತು ವರ್ಷ ಬಲ್ಡೋಟ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹೋರಾಡಿದ ಸೂರ್ಯರೆಡ್ಡಿ, ನ್ಯಾಯವಾದಿ ರಾಜು ಬಾಕಳೆ ಹೋರಾಟ ಅನುಭವ ಹಂಚಿಕೊಂಡರು. ಸಾಹಿತಿ ವಿರೂಪಾಕ್ಷಪ್ಪ ಕೋರಗಲ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್.ಎಸ್. ಪಾಟೀಲ್, ಭೂ ಬಾಧಿತ ಎಸ್. ನಾರಾಯಣರೆಡ್ಡಿ, ಕೃಷ್ಣ ಬೇವಿನಕಟ್ಟಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಭಾಗ್ಯನಗರ ಗ್ಯಾನೇಶ ಹ್ಯಾಟಿ, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ. ರಾಜೂರು, ಪಿ.ಎಸ್. ಹಿರೇಮಠ, ಜಿ.ಬಿ.ಪಾಟೀಲ್, ಪುಟ್ಟರಾಜ ಪಾಟೀಲ್, ಶರಣು ಶೆಟ್ಟರ್, ಶೇಖರ್ ಎಸ್. ಇಂಗಳದಾಳ, ನಾಗರಾಜ ಕುಷ್ಟಗಿ, ರವಿ ಕಾಂತನವರ, ಮಲ್ಲಿಕಾರ್ಜುನಗೌಡ ಅಣ್ಣಿಗೇರಿ, ಗಾಳೆಪ್ಪ ಪೂಜಾರ, ವಿನಯ ಸಜ್ಜನ್, ಬಿ.ಜಿ. ಕರಿಗಾರ, ಶಿವರಾಜ ಕನಕಗಿರಿ, ಕಾಶಪ್ಪ ಚಲವಾದಿ, ಹನುಮಪ್ಪ ಚಿಂಚಲಿ, ರತ್ನಮ್ಮ ದೊಡ್ಡಮನಿ, ಯಮನೂರ್ಪ ಹಾಲಳ್ಳಿ, ಶರಣು ಗಡ್ಡಿ, ವೈ. ಸತ್ಯನಾರಾಯಣ, ಮಹಾದೇವಪ್ಪ ಮಾವಿನಮಡು, ಆಟೋ ಮಂಜಪ್ಪ, ವಿಜಯ ಮಹಾಂತೇಶ ಹಟ್ಟಿ, ಯಂಕಪ್ಪ ಡೊಳ್ಳಿನ, ಟಿ ಕೊಟ್ರೇಶ್ ಗಂಗಮ್ಮ ಕೊಡೇಕಲ್, ಶಿವಪ್ಪ ಜಲ್ಲಿ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 