ಕಡಲೆ ಬೆಳೆಯಲ್ಲಿ ಪೋಷಕಾಂಶ ನಿರ್ವಹಣೆ ಬಗ್ಗೆ ಸಲಹೆ
Advice on nutrient management in chickpea crop
ಗದಗ 20: ಜಿಲ್ಲೆಯಲ್ಲಿ ಪ್ರಸ್ತುತ ಕಡಲೆ ಬೆಳೆಯು ಹೂವಾಡುವ ಹಂತದಿಂದ ಕಾಯಿ ಕಟ್ಟುವ ಹಂತದವರೆಗಿದೆ. ಬಹಳಷ್ಟು ಕಡೆಗಳಲ್ಲಿ, ಪೋಷಕಾಂಶಗಳ ಕೊರತೆಯಿಂದ ಸದರಿ ಬೆಳೆಯು ಹಳದಿ ಹಾಗೂ ಕೆಂಪು ಬಣ್ಣಕ್ಕೆ ತಿರುಗಿ ಒಣಗಿದ ಹಾಗೆ ತಾಕಿನಲ್ಲಿ ಕಾಣಸಿಗುತ್ತಿದೆ.
ಪೋಷಕಾಂಶಗಳ ಕೊರತೆಯಿಂದ ಬೆಳೆಯ ಬೆಳವಣಿಗೆ ಕುಂಠಿತವಾಗಿ, ಇಳುವರಿಯು ಕಡಿಮೆಯಾಗುವ ಸಂಭವವಿರುತ್ತದೆ. ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ದ್ರವರೂಪದ ಲಘುಪೋಷಕಾಂಶಗಳ ಮಿಶ್ರಣವನ್ನು (2ಮಿ.ಲೀ./ಲೀ.) ಶಿಫಾರಸ್ಸಿಗನುಗುಣವಾಗಿ ಬೆಳೆಗೆ ಸಿಂಪಡಿಸಿದ್ದಲ್ಲಿ, ಎಲ್ಲ ಪೋಷಕಾಂಶಗಳು ಬೆಳೆಗೆ ಒದಗಿ, ಬೆಳೆಯು ಸಮೃದ್ಧವಾಗಿ, ಇಳುವರಿಯು ಉತ್ತಮವಾಗಿರುತ್ತದೆ ಎಂದು ಗದಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಚೇತನಾ ಪಾಟೀಲ ತಿಳಿಸಿದ್ದಾರೆ.
ಬೆಳೆಗೆ ಬೇಕಾದ ಬೊರೋನ್ ಮೂಲದ ಪೋಷಕಾಂಶವನ್ನು ಶಿಫಾರಸ್ಸಿಗನ್ವಯ ದ್ರವರೂಪದ ಕನ್ಸೋರ್ಷಿಯಾದ ಜೊತೆಗೆ (2ಮಿ.ಲೀ./ಲೀ.) ಸಿಂಪರಣೆ ಮಾಡಿದಲ್ಲಿ, ಚೆನ್ನಾಗಿ ಹೂವು ಹಿಡಿದು, ಕಾಯಿ ಕಟ್ಟಿ, ಗುಣಮಟ್ಟದ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಸದರಿ ಎಲ್ಲ ಪೋಷಕಾಂಶಗಳು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಜಿಲ್ಲೆಯ ಎಲ್ಲ ರೈತರು ಅವುಗಳ ಉಪಯೋಗ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ. ಸದರಿ ಪೋಷಕಾಂಶಗಳನ್ನು ರೈತ ಬಾಂಧವರು ಸಿಂಪಡಿಸುವ ಕೀಟನಾಶಕಗಳ ಜೊತೆಗೆ ಕೂಡ ಮಿಶ್ರ ಮಾಡಿ ಸಿಂಪಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 