ನಾದಮೃತ ಎಂಬ ವಿಶೇಷ ಕಾರ್ಯಕ್ರಮ

ನಾದಮೃತ ಎಂಬ ವಿಶೇಷ ಕಾರ್ಯಕ್ರಮ A special program called Naadamrutha


ಬಳ್ಳಾರಿ 18:  ನಾದಯೋಗಿ ಗುರು ಪುಟ್ಟರಾಜ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆಯವತಿಯಿಂದ ಚಳ್ಳಾರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾದಮೃತ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮುಖ್ಯ ಗುರುಗಳಾದ ಯೋಗನರಸಿಂಹರವರು ಸಂಗೀತಕ್ಕೆ ಭಾಷೆಯ ಗಡಿ ಇಲ್ಲ ಅದಕ್ಕೆ ಪ್ರಾಣಿ ಪಶು ಪಕ್ಷಿಗಳು ಕೂಡ ಹೊರತಾಗಿಲ್ಲ, ಸಂಗೀತ ಒಂದು ದೇವರ ಅತ್ಯದ್ಭುತ ಕೊಡುಗೆಯಾಗಿದೆ ಎಂದರು. ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷರಾದ ಯಮನೂರ​‍್ಪ ಗದಗಿನ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಸುಜಾತ, ಗೀತಾ, ಗುನ್ನಪ್ಪ ಗುಮಗೇರಿ, ಶರಣಪ್ಪ ಗೆದಗೇರಿ, ಯಲ್ಲಪ್ಪ ದೊಡ್ಡಮನಿ, ಬಸಪ್ಪ ಹಳ್ಳಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಸಂಗೀತ ಶರಣಪ್ಪರಿಂದ ಸುಗಮ ಸಂಗೀತ, ಶ್ಯಾಮಲಾ ದೊಡ್ಡಮನಿಯವರಿಂದ ಜನಪದ ಸಂಗೀತ, ಸಂಜನ್ ಬೆಲ್ಲದರಿಂದ ವಚನ ಸಂಗೀತ, ಯೋಗನರಸಿಂಹರವರಿಂದ ಜನಪದ ಗೀತೆಗಳು, ರಂಜಿತಾ ನಂದ್ಯಾಲ ಭರತನಾಟ್ಯ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂದವು.