ಭಾರತದ ಕನಸು ನನಸಾಗಿಸುವ ಬಜೆಟ್
ರಾಣೇಬೆನ್ನೂರು 03: ಈ ಬಜೆಟ್ ವಿಕಸಿತ ಭಾರತ ಮತ್ತು ಹೊಸ ಮತ್ತು ಶಕ್ತಿಯುತ ಭಾರತದ ಕನಸನ್ನು ನನಸಾಗಿಸುವ ಪ್ರಧಾನಿ ಮೋದಿ ಅವರ ಸಂಕಲ್ಪಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರತಿಯೊಂದು ಕ್ಷೇತ್ರವನ್ನು ಸರಿಯಾಗಿ ಅಧ್ಯಯನ ಮಾಡಿದ ನಂತರವೇ, ದೇಶದ ಆರ್ಥಿಕತೆಯ ಹೊಸ ನಕ್ಷೆಯನ್ನು ರಚಿಸಲಾಗಿದೆ. ಈ ಸಂಯೋಜಿತ ಬಜೆಟ್ ಭಾರತವನ್ನು ವಿಶ್ವಗುರುವಾಗಿ ಸ್ಥಾಪಿಸುತ್ತದೆ.. "ಬಡವರು, ಮಧ್ಯಮ ವರ್ಗದವರಿಗಾಗಿ, ಎಂ.ಎಸ್.ಎಂ.ಇ ಸ್ಟಾರ್ಟಪಗಳಿಗೆ , ವಿಶಷವಾಗಿ ಕೃಷಿಕರಿಗೆ ಹಾಗೂ ಎಲ್ಲರಿಗಾಗಿ ಅದ್ಭುತ ಬಜೆಟ್ ಮಂಡಿಸಲಾಗಿದೆ. ಪ್ರಧಾನಿ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ್ದಾರೆ.