ಮೆಕ್ಕೆಜೋಳ ತೆನೆಯ ರವದಿಯಲ್ಲಿ ಅರಳಿದ ಮೊಗ್ಗು
A bud blossoming in the corn cob
ಹೂವಿನಹಡಗಲಿ 30: ಪಟ್ಟಣದ ಪೂರ್ವ ದಿಕ್ಕಿಗೆ ಪುಟ್ಟಗ್ರಾಮ ಮುದೇನೂರು ಗ್ರಾಮದ ಈ ಮಹಿಳೆ ಪಾರ್ವತಿ ತಳವಾರು ಇಂದು ತಾನು ತಯಾರಿಸಿದ. ಕರಕುಶಲ ವಸ್ತುಗಳನ್ನು ರಾಜ್ಯ. ಅಂತ ರಾಷ್ಟ್ರೀಯ ಮಟ್ಟದಲ್ಲಿ ಮಾರ್ಕೆಟಿಂಗ್ ಕೂಡಾ ಮಾಡುತ್ತಿದ್ದಾರೆ . ಅರೆ ! ಹೀಗೂ ಸಾದ್ಯನಾ ಅಂತಾ ಕೇಳೋರಿಗೆ . ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ ಈ ಗೃಹಿಣಿ . ಈಚೆಗೆ ನಡೆದ ಜಿ.20 ಕಾರ್ಯ ಕ್ರಮಕ್ಕೆ ವಿದೇಶದಿಂದ ಬರುವ ಗಣ್ಯರಿಗೆ ಸ್ವಾಗತಕ್ಕೆ ಇವರ ತಯಾರಿಸಿದ ಮೊಗ್ಗು ಮತ್ತು ಹೂವುಗಳು ಮೆಚ್ಚುಗೆ ವ್ಯಕ್ತವಾಗಿದೆ. ಮೆಕ್ಕೆಜೋಳ ತೆನೆಯ ರವದಿಯಲ್ಲಿ ಮೊಗ್ಗು. ಹೂವುಗಳು. ಗೊಂಬೆಗಳ ತಯಾರಿಕೆ. ಮನೆಯ ಬಾಗಿಲು ತೋರಣಗಳು.ಹೂ ಕುಂಡಲ ಜತೆಗೆ ಸಭೆ ಸಮಾರಂಭಗಳಲ್ಲಿ ಸ್ವಾಗತ ಕೋರಲು ಮೊಗ್ಗು. ಹೂವುಗಳು ಜನರ ಪ್ರಶಂಸೆ ಗಳಿಸಿವೆ. " ಹೂವಿನಹಡಗಲಿ ಸುತ್ತಮುತ್ತಲಿನ ಸಂಘ.ಸಂಸ್ಥೆಗಳು ಇವರ ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮುದೇನೂರು ಗ್ರಾಮದ ಪಾರ್ವತಿ ಶ್ರೀ ಧರ ತಳವಾರು ಇವರು ಸಂಜೀವಿನಿ ಮಹಿಳಾ ಒಕ್ಕೂಟದ ಅದ್ಯಕ್ಷರಾಗಿದ್ದಾಳೆ. ಜತೆಗೆ ತಾಲೂಕಿನ ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬಿ ಜೀವನದ ಕಂಡು ಕೊಳ್ಳಲು ಕರಕುಶಲ ಕಲೆ ತರಬೇತಿ ಬದುಕು ಕಟ್ಟಿ ಕೊಳ್ಳುವ ಲ್ಲಿ ಸಹಕಾರಿಯಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 