ಬಯಲು ಬಹಿದರ್ೆಸೆಯಿಂದ ಮುಕ್ತ: ಪಿಡಿಓಗಳಿಗೆ ಸನ್ಮಾನ
ತಾ ಪಂ ಸಭಾ ಭವನದಲ್ಲಿ ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ ಪಿಡಿಓಗಳಿಗೆ ಸನ್ಮಾನ ಮಾಡಿದ ಕಾರ್ಯನಿವರ್ಾಹಕ ಅಧಿಕಾರಿ ಕೆ ಎ
ಚಿಕ್ಕೋಡಿ 10: ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳ ತಮ್ಮ ಗ್ರಾಮಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಲೇಬೇಕಾಗಿದೆ. ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಾ ಪಂ ಕಾರ್ಯನಿವರ್ಾಹಕ ಅಧಿಕಾರಿ ಕೆ ಎಸ್ ಪಾಟೀಲ ಹೇಳಿದರು.
ಮಂಗಳವಾರ ತಾ.ಪಂ. ಸಭಾ ಭವನದಲ್ಲಿ ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನ ಮಾಡಿ ಮಾತನಾಡಿದರು.
ಆಡಿ ಗ್ರಾ ಪಂ ಪಿಡಿಓ ಶಿವಾನಂದ ತೇಲಿ, ಬೆನಾಡಿ ಗ್ರಾ ಪಂ. ಪಿಡಿಓ ರಾಮಚಂದ್ರ ವಾಳಕೆ, ಬಾರವಾಡ ಗ್ರಾ ಪಂ. ಪಿಡಿಓ ಪ್ರಕಾಶ ಧನಗರ, ಚಂದೂರ ಗ್ರಾ ಪಂ. ಪಿಡಿಓ ಪ್ರಕಾಶ ಸಮಾಜನ್ನವರ, ಹುನ್ನರಗಿ ಗ್ರಾ ಪಂ. ಪಿಡಿಓ ಆನಂದ ಮಾಳಿ, ಮಲಿಕವಾಡ ಗ್ರಾ ಪಂ. ಪಿಡಿಓ ಅಶೋಕ ಹೊನವಾಡ, ಶಿರದವಾಡ, ಗ್ರಾ ಪಂ ಪಿಡಿಓ ಕುಬೇರ ಕಾಗೆ, ಸಿದ್ನಾಳ ಗ್ರಾ ಪಂ ಪಿಡಿಓ ದಯಾನಂದ ಬಾಚನ್ನಕರ ಇವರು ಗ್ರಾಮ ಪಂಚಾಯತಿಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ್ದಾರೆ. ನೀವು ಇದೆ ರೀತಿ ಕೆಲಸ ಮಾಡಬೇಕು ಹಾಗೂ ಎಲ್ಲರೂ ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಓಡಿಎಪ್ ಮಾಡಲು ತಿಳಿಸಿದರು.
ತಾ ಪಂ ಸಹಾಯಕ ನಿದರ್ೇಶಕ ಆನಂದ ಬಡಕುಂದ್ರೆ, ವ್ಯವಸ್ಥಾಪಕ ಗುರುನಾಥ ಎಂ ಸ್ವಾಮಿ, ಶಿವಾನಂದ ಶಿರಗಾಂವೆ, ಶಶಿಕಾಂತ ಜೋರೆ, ಗುಲಾಬ ಗೌಂಡಿ, ಚೇತನ ಶಿರಹಟ್ಟಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳು ಉಪಸ್ಥಿತರಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 