ಕ್ಯಾಪಷನ್: ಹಿರಿಯ ತಲೆಮಾರಿನ ಜನಪದ ಕಲಾವಿದೆ ನಿಂಬೆವ್ವ ಜಗದಾಳ ಅವರಿಗೆ ಜನಪದ ಸಿರಿ-2018 ಗೌರವ ಪ್ರಶಸ್ತಿಯನ್ನು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ನೀಡಿ ಗೌರವಿಸಲಾಯಿತು.
ಮುಧೋಳ 06: ಜನಪದವೇ ಜೀವನ ಎಂದು ಬದುಕು ನಡೆಸುತ್ತಿರುವ ನಮ್ಮ ಗ್ರಾಮೀಣ ಭಾಗದಲ್ಲಿರುವ ಜನಪದರು ಜೀವಂತ ವಿಶ್ವವಿದ್ಯಾಲಯ ಎಂದು ಸಾಹಿತಿ ಡಾ.ಸಿದ್ದು ದಿವಾನ ಹೇಳಿದರು.
ಅವರು ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಸ್ಥಳೀಯ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆ (ರಿ) ಹಾಗೂ ಆಯ್.ಎಸ್.ಮಂಟೂರ ಗ್ರಾಮೀಣಾಭಿವೃದ್ಧಿ ಜನಸೇವಾ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಸ್ಮರಣೋತ್ಸವದ ನಿಮಿತ್ಯ ಜರುಗಿದ ಜನಪದ ವಾಣಿ ಸಾಂಸ್ಕೃತಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಜನಪದ ಎಂದರೆ ಸತ್ಸಂಪ್ರದಾಯ, ಜನಪದಕ್ಕೆ ಜೀವಾಗಿರುವ ಜನಪದರನ್ನು ಗುರುತಿಸಿ ಹಾಗೂ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಸ್ತುತಿ ನಿಂದೆಗಳ ಮಧ್ಯ ಜನಪದವೇ ಜೀವನವೆಂದು ನಂಬಿರುವ ನಮ್ಮ ಗ್ರಾಮೀಣ ಪ್ರದೇಶದ ಜನಪದರು ಕಲೆ, ಸಾಹಿತ್ಯ, ಸಂಸ್ಕೃತಿ ಸಂಸ್ಕಾರಗಳ ನಿಜವಾದ ಕಾವಲುಗಾರರು, ಜನಪದರು ಸಂಸ್ಕೃತಿಯ ಸಂಕೇತ ಎಂದು ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಟಾನದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಹಿರಿಯ ಪಾರಿಜಾತ ಕಲಾವಿದ ಮಲ್ಲಿಕಾಜರ್ುನ ಮುದಕವಿ ಹಾಗೂ ಮೆಟಗುಡ್ಡದ ಅಪ್ಪಣ್ಣ ಶರಣರು ಆಧ್ಯಾತ್ಮಿಕ ವಿಷಯಗಳನ್ನು ವಿವರಿಸಿದರು.
ಹಿರಿಯ ತಲೆಮಾರಿನ ಜನಪದ ಕಲಾವಿದೆ ನಿಂಬೆವ್ವ ಗು.ಜಗದಾಳ ಅವರಿಗೆ ಜನಪದ ಸಿರಿ-2018 ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್.ಜಿ.ಪರಸನ್ನವರ ಡೊಳ್ಳು ನುಡಿಸಿ ಜನಪದವಾಣಿ ಸಮಾರಂಭವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶಾಮಲಾ ಲಕ್ಷ್ಮೇಶ್ವರ ಅಧ್ಯಕ್ಷತೆ ವಹಿಸಿದ್ದರು.
ಚಿಕ್ಕೂರ ಗ್ರಾಮದ ಹೊಳಬಸಪ್ಪ ಬದಾಮಿ, ಚಿಮ್ಮಡದ ಯಲ್ಲಪ್ಪ ಜಬ್ಬರಕಿ, ಮೆಳ್ಳಿಗೇರಿಯ ರಾಯಪ್ಪ ಮುಗಳಿ, ಮುಗಳಖೋಡದ ತೇಜಸ್ವಿನಿ ಲಕ್ಷ್ಮೇಶ್ವರ ಇವರಿಂದ ಡೊಳ್ಳಿನ ಪದ, ಕುಳಲಿಯ ಯಲ್ಲಪ್ಪ ಬನಾಜಗೋಳ ಭಜನೆ, ಜಯಶ್ರೀ ನಡುವಿನಕೇರಿ ಸಂಗಡಿಗರಿಂದ ಚೌಡಕಿ ಪದ, ಸುಮ್ಮವ್ವ ಮಠಪತಿ ಸಂಗಡಿಗರಿಂದ ಸಂಪ್ರದಾಯದಿಂದ ಮುಧೋಳದ ಗಂಗವ್ವ ರಾ.ನಾವ್ಹಿ ಮುಂತಾದ ಕಲಾತಂಡಗಳಿಂದ ``ಜನಪದ ಧ್ವನಿ'' ಕೇಳಿ ಬಂದಿತು. ಚಿದಾನಂದ ಹುಂಡೇಕಾರ, ಶಿವು ಜೋಗಿ, ಸುರೇಶ ಹುಂಡೇಕಾರ,ರಮೇಶ ಸೋಲೋನಿ ಮುತ್ತಪ್ಪ ಪೋಳ ಮುಂತಾದವರು ಉಪಸ್ಥಿತರಿದ್ದರು.