ಚಡಚಣ: ಹದಗೆಟ್ಟ ರಸ್ತೆ: ಡಾಂಗರೀಕರಣ ಯಾವಾಗ?
ರಮೇಶ ಬಿರಾದಾರ ಚಡಚಣ:
ಶಿರಾಡೋಣ-ರೇವತಗಾಂವ 27: ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆ ಡಾಂಬರಿಕರಣ ಯಾವಾಗ ಎಂದು ಪ್ರಶ್ನೆ ವಾಹನ ಸವಾರರು ಕೇಳುವಂತಾಗಿದೆ.
ರಸ್ತೆ ಮೇಲೆ ಹೊರಟ ವಾಹನಗಳು ಕುಡಿದ ಅಮಲಿನಲ್ಲಿ ಹೊರಟಿವೆ ಎಂಬ ಭಾವನೆ ವ್ಯಕ್ತವಾಗಿತ್ತಿವೆ. ರಸ್ತೆ ತುಂಬೆಲ್ಲ ನೋಡಿದೆಲ್ಲಕಡೆ ತಗ್ಗು-ಗುಂಡಿಗಳಿಂದ ಕೂಡಿವೆ. ರಸ್ತೆ ಮೇಲೆ ಹೊರಟ ವಾಹನ ಸವಾರರು ಅತ್ತಲಿಂದ ಇತ್ತಕಡೆ ಇತ್ತಲಿಂದ ಅತ್ತಕಡೆ ಅಲೆದಾಡಿ ಗುಂಡಿಗಳು ತಪ್ಪಿಸುಲು ಹರಸಾಹಸ ಪಡುವಂತಗಿದೆ. 20 ನಿಮಿಷಗಳಿಲ್ಲಿ ಸಾಗಬೇಕಾದುವು ಒಂದು ಗಂಟೆಗೂ ಅದಿಕ ಸಮಯ ಪಡೆಯುವಂತಾಗಿದೆ. ಈ ರಸ್ತೆ ಗುಂಡಿಗಳಿಂದ ಹಲವಾರು ರಸ್ತೆ ಅಫಗಾತದಲ್ಲಿ ಕೈ-ಕಾಲು ಕಳೆದುಕೊಂಡ ಅಥವಾ ಸಣ್ಣ ಪುಟ್ಟು ಗಾಯಗಳಾದ ಉದಾಹರಣೆಗಳು ಎನ್ನುತ್ತಾರೆ ರೇವಣಸಿದ್ದ ಹಬಗೊಂಡೆ, ತಮ್ಮಾರಾಯ ಬಿರಾದಾರ, ಸತೀಶ ಬಗಲಿ ರಾಯಪ್ಪ ಮಾಳಿ ಅಳಲು ತೋಡಿಕೊಂಡರು.
ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಸುಧಾರಣೆಗೆ ಮುಂದಾಗುತ್ತಾರೋ ಇಲ್ಲವೋ ಕಾದು ನೋಡೋಣ.
ಅನಿಸಿಕೆಗಳು:
ರಸ್ತೆ ತುಂಬೆಲ್ಲ ಗಿಂಡಿಗಳಿಂದ ಕೂಡಿದ್ದು, ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿವೆ. ಮಳೆ ಬಮದ ಸಂದರ್ಭದಲ್ಲಿ ಬೈಕ್ ಸಾವಾರರು ಪರದಾಡುವಂತಾಗಿದೆ. ಕೂಡಲೇ ಮರು ಡಾಂಬರೀಕರಣ ಗೊಳಿಸಿ ಸವಾರರಿಗೆ ಅನಕೂಲ ಕಲ್ಪಿಸಬೇಕು.
-ಶಿರಾಡೋಣ ಗ್ರಾ.ಪಂ ಸದಸ್ಯ ನೀಲಕಂಠ ಬಿರಾದಾರ
ಶಿರಾಡೋಣ-ರೇವತಗಾಂವ ಹದಗೆಟ್ಟ ರಸ್ತೆ ಡಾಂರಿಕರಣ ಗೊಳಿಸದೇ ಹೋದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ.
-ಸಿದ್ದವ್ವ ಮಾಳಿ, ಭೀಮಾಶಂಕರ ಪೂಜಾರಿ ಶಿರಾಡೋಣ ಗ್ರಾ. ಪಂ ಸದಸ್ಯರುಗಳು
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು 