ಚಡಚಣ: ಹದಗೆಟ್ಟ ರಸ್ತೆ: ಡಾಂಗರೀಕರಣ ಯಾವಾಗ?

ಚಡಚಣ: ಹದಗೆಟ್ಟ ರಸ್ತೆ: ಡಾಂಗರೀಕರಣ ಯಾವಾಗ?

ರಮೇಶ ಬಿರಾದಾರ ಚಡಚಣ: 

ಶಿರಾಡೋಣ-ರೇವತಗಾಂವ 27: ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆ ಡಾಂಬರಿಕರಣ ಯಾವಾಗ ಎಂದು ಪ್ರಶ್ನೆ ವಾಹನ ಸವಾರರು ಕೇಳುವಂತಾಗಿದೆ.

ರಸ್ತೆ ಮೇಲೆ ಹೊರಟ ವಾಹನಗಳು ಕುಡಿದ ಅಮಲಿನಲ್ಲಿ ಹೊರಟಿವೆ ಎಂಬ ಭಾವನೆ ವ್ಯಕ್ತವಾಗಿತ್ತಿವೆ. ರಸ್ತೆ ತುಂಬೆಲ್ಲ ನೋಡಿದೆಲ್ಲಕಡೆ ತಗ್ಗು-ಗುಂಡಿಗಳಿಂದ ಕೂಡಿವೆ. ರಸ್ತೆ ಮೇಲೆ ಹೊರಟ ವಾಹನ ಸವಾರರು ಅತ್ತಲಿಂದ ಇತ್ತಕಡೆ ಇತ್ತಲಿಂದ ಅತ್ತಕಡೆ ಅಲೆದಾಡಿ ಗುಂಡಿಗಳು ತಪ್ಪಿಸುಲು ಹರಸಾಹಸ ಪಡುವಂತಗಿದೆ. 20 ನಿಮಿಷಗಳಿಲ್ಲಿ ಸಾಗಬೇಕಾದುವು ಒಂದು ಗಂಟೆಗೂ ಅದಿಕ ಸಮಯ ಪಡೆಯುವಂತಾಗಿದೆ. ಈ ರಸ್ತೆ ಗುಂಡಿಗಳಿಂದ ಹಲವಾರು ರಸ್ತೆ ಅಫಗಾತದಲ್ಲಿ ಕೈ-ಕಾಲು ಕಳೆದುಕೊಂಡ ಅಥವಾ ಸಣ್ಣ ಪುಟ್ಟು ಗಾಯಗಳಾದ ಉದಾಹರಣೆಗಳು ಎನ್ನುತ್ತಾರೆ ರೇವಣಸಿದ್ದ ಹಬಗೊಂಡೆ, ತಮ್ಮಾರಾಯ ಬಿರಾದಾರ, ಸತೀಶ ಬಗಲಿ ರಾಯಪ್ಪ ಮಾಳಿ ಅಳಲು ತೋಡಿಕೊಂಡರು.  

ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಸುಧಾರಣೆಗೆ ಮುಂದಾಗುತ್ತಾರೋ ಇಲ್ಲವೋ ಕಾದು ನೋಡೋಣ. 

ಅನಿಸಿಕೆಗಳು: 

ರಸ್ತೆ ತುಂಬೆಲ್ಲ ಗಿಂಡಿಗಳಿಂದ ಕೂಡಿದ್ದು, ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿವೆ. ಮಳೆ ಬಮದ ಸಂದರ್ಭದಲ್ಲಿ ಬೈಕ್ ಸಾವಾರರು ಪರದಾಡುವಂತಾಗಿದೆ. ಕೂಡಲೇ ಮರು ಡಾಂಬರೀಕರಣ ಗೊಳಿಸಿ ಸವಾರರಿಗೆ ಅನಕೂಲ ಕಲ್ಪಿಸಬೇಕು.

-ಶಿರಾಡೋಣ ಗ್ರಾ.ಪಂ ಸದಸ್ಯ ನೀಲಕಂಠ ಬಿರಾದಾರ 

ಶಿರಾಡೋಣ-ರೇವತಗಾಂವ ಹದಗೆಟ್ಟ ರಸ್ತೆ ಡಾಂರಿಕರಣ ಗೊಳಿಸದೇ ಹೋದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ. 

-ಸಿದ್ದವ್ವ ಮಾಳಿ, ಭೀಮಾಶಂಕರ ಪೂಜಾರಿ ಶಿರಾಡೋಣ ಗ್ರಾ. ಪಂ ಸದಸ್ಯರುಗಳು