ಯುವಕರು ಕಲೆಯನ್ನು ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು- ವಿದ್ಯಾವತಿ ಭಜಂತ್ರಿ

ಯುವಕರು ಕಲೆಯನ್ನು ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು- ವಿದ್ಯಾವತಿ ಭಜಂತ್ರಿ Youth should cultivate art and shape their lives - Vidyavati Bhajantri

ಯುವಕರು ಕಲೆಯನ್ನು ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು- ವಿದ್ಯಾವತಿ ಭಜಂತ್ರಿ 

ಯಮಕ್ಕನಮರಡಿ 29: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಜು. 28 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಹಾಗೂ ಎಸ್ ಆರ್ ಎಂ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಯಮಕನಮರಡಿ ಇವರ ಸಂಯುಕ್ತ ಆಶ್ರಯದಲ್ಲಿ ಯುವ ಸೌರಭ ಕಾರ್ಯಕ್ರಮ ಉತ್ಸಾಹದಿಂದ  ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಎಸ್ ಎ ರಾಮನ ಕಟ್ಟಿ ವಹಿಸಿದ್ದರು. ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಗಿದ ವಿದ್ಯಾವತಿ ಎಹ್‌. ಭಜಂತ್ರಿ ಉಪ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರು ನಾಡಿನ ಸಂಸ್ಕೃತಿ ಬಗ್ಗೆ ಮಾತನಾಡುತ್ತಾ ಇಂದಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗಾಯನ. ನೃತ್ಯ. ಭರತನಾಟ್ಯ. ನಾಟಕ. ವಿವಿಧ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದರೊಂದಿಗೆ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ವಿವಿಧ ಕಲಾತಂಡಗಳಿಂದ ಗಾಯನ ಭರತನಾಟ್ಯ.ಡೊಳ್ಳು ಕುಣಿತ. ಜಾನಪದ ಗೀತೆ, ಸುಗಮ ಸಂಗೀತ. ತತ್ವಪದಗಳು. ಜಾನಪದ ನೃತ್ಯ. ನೃತ್ಯರೂಪಕ ಹೀಗೆ ವಿಧ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಜರುಗಿದವು ಕಾರ್ಯಕ್ರಮವನ್ನು ಉದ್ದೇಶಿಸಿ ಹುಕ್ಕೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರಕಾಶ್ ಅವಲಕ್ಕಿ. ಹಿರಿಯ ಕಲಾವಿದರಾದ ಬಾಬಾಸಾಹೇಬ್ ಕಾಂಬಳೆ ಪ್ರಾಚಾರ್ಯರಾದ ಎಸ್‌ಎ  ರಾಮನ ಕಟ್ಟಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಹತ್ತರಿಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಮೀರ್ ಬೇಪಾರಿ. ಕಾಲೇಜ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವೀರಣ್ಣ ಬ. ಬಿಸಿ ರೊಟ್ಟಿ ಸದಸ್ಯರಾದ ಸಿದ್ದಪ್ಪ ಶಿಲ್ಲಿ, ಹಿರಿಯರಾದ  ಶ್ರೀಶಂಕರ್ ಕುಡಚಿ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವರ್ಗದವರು ಹಾಜರಿದ್ದರು. ಭರತ್ ಕಲಾಚಂದ್ರ್‌ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಎಸ್ ಆರ್ ತಬರಿ  ಎಲ್ಲರನ್ನು ವಂದಿಸಿದರು ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿತು.