ವಿದ್ಯುತ್ ತಗುಲಿ ಯುವಕ ಸಾವು
Young man dies after being electrocuted
ವಿದ್ಯುತ್ ತಗುಲಿ ಯುವಕ ಸಾವು
ಜಮಖಂಡಿ 09: ನಗರದ ಚಿಕ್ಕಲಗಾರ ಗಲ್ಲಿಯ ಯುವಕನೊರ್ವನಿಗೆ ಬೆಳಗಿನ ಜಾವದಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಮುಧೋಳ ರಸ್ತೆಯ ಪಕ್ಕದಲ್ಲಿರುವ ಚಿಕ್ಕಲಗಾರ ಗಲ್ಲಿಯ ಯುವಕ ದರ್ಶನ ಚಂದ್ರಶೇಖರ ಚಿಕ್ಕಲಗಾರ (20) ಸಾವನ್ನಪ್ಪಿದ ದುರ್ದೈವಿ. ಬೆಳಗಿನ ಜಾವದಲ್ಲಿ ದೇವಸ್ಥಾನದ ಮೇಲೆ ವಿದ್ಯುತ್ ಬಲ್ಪ್ ಜೋಡಣೆ ಮಾಡಲು ಹೋದ ಸಮಯದಲ್ಲಿ ದೇವಸ್ಥಾನದ ಮೇಲೆ ಮುಖ್ಯ ವಿದ್ಯುತ್ ಕಂಬದ ತಂತಿ ಹಾಯ್ದಿದ್ದು, ಬಲ್ಪವನ್ನು ಜೋಡಿಸುತ್ತಿದ್ದು ವೇಳೆಯಲ್ಲಿ ವಿದ್ಯುತ್ ಮೇನ್ ಲೈನ್ ಅತೀ ಕೆಳಗಡೆ ಇರುವ ಕಾರಣ ಮೃತನ ಕೈ ತಗುಲಿದ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬರುತ್ತದೆ.
ಸ್ಥಳಕ್ಕೆ ಶಹರ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟುವಂತೆ ಇತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 