ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ Young man commits suicide by hanging himself

ಕೊಲ್ಹಾರ 16: ಪಟ್ಟಣದ ಬಜಾಜ್ ಶೋರೂಂ ಹತ್ತಿರ ಇರುವ ಬಸವೇಶ್ವರ ಮಾರ್ಕೆಟಿಂಗ್ ಅಂಗಡಿ ಮಳಿಗೆಯ ಮೇಲಿನ ಕಟ್ಟಡದಲ್ಲಿ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. 

ಮೃತರನ್ನು ಬಬಲೇಶ್ವರ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಭೀಮೇಶ (ದೇವೇಶ) ದ್ಯಾವಾಪೂರ (25) ಎಂದು ಗುರುತಿಸಲಾಗಿದೆ. ಯುವಕನ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕೊಲ್ಹಾರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.