ಜ್ಞಾಪಕ ಶಕ್ತಿ ಹೆಚ್ಚಳಕ್ಕೆ ಯೋಗ ಅಗತ್ಯ: ಏಕಾಂತ ಮುದಿಗೌಡರ
Yoga is essential to increase memory power: Ekantha Mudigowda
ನ್ಯೂ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನಾಚರಣೆ ವಿದ್ಯಾರ್ಥಿಗಳ ಜ್ಞಾನಾರ್ಜನೆ
ರಾಣೇಬೆನ್ನೂರು 1: ಇಲ್ಲಿನ ಮಾರುತಿ ನಗರದ ಎರೇಕುಪ್ಪಿ ರಸ್ತೆಯ, ನ್ಯೂ ಪಬ್ಲಿಕ್ ಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಶಾಲೆಯ 400ಕ್ಕೂ ಹೆಚ್ಚು ಮಕ್ಕಳಿಂದ, ಸಾಮೂಹಿಕವಾಗಿ ಯೋಗ, ಧ್ಯಾನ, ಮತ್ತು ಪ್ರಾಣಾಯಾಮದೊಂದಿಗೆ ಆಯೋಜಿಸಲಾಗಿತ್ತು.
ಆಕರ್ಷಕವಾಗಿ, ಆಧ್ಯಾತ್ಮಿಕ ರೂಪದಲ್ಲಿ ನಡೆದ "ಯೋಗ" ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ, ಸಂಸ್ಥೆಯ ಅಧ್ಯಕ್ಷ, ನೋಟರಿ ಏಕಾಂತ್ ಮುದಿಗೌಡರ ಅವರು ಮಕ್ಕಳ ಭವಿಷ್ಯ ಸುಂದರವಾಗಿ ಮತ್ತು ಆಕರ್ಷಕವಾಗಿ ಸಾಗಬೇಕಾದರೆ, ತಮ್ಮ ಶಿಕ್ಷಣದ ಜೊತೆ, ಜೊತೆಗೆ ನಿತ್ಯವೂ ಕೆಲ ಕ್ಷಣ ಯೋಗ ಮತ್ತು ಪ್ರಾಣಾಯಾಮ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಿದೆ ಎಂದರು. ಯೋಗದಿಂದ ಶಾಂತಿ ಮತ್ತು ನೆಮ್ಮದಿ ಪ್ರಾಪ್ತಿಯಾಗುವುದು ಅಲ್ಲದೆ ಜ್ಞಾನಾರ್ಜನೆಗೆ ಜ್ಞಾಪಕ ಶಕ್ತಿ ಹೆಚ್ಚಳವಾಗುವುದು ಎಂದು ವಿಶ್ಲೇಷಿಸಿ ಮಾತನಾಡಿದ ಅವರು, ಸುಧೀರ್ಘ ಜೀವನದ ಬದುಕಿಗೆ, ಇತಿಹಾಸದ ನಮ್ಮ ಋಷಿ ಮುನಿಗಳು ನೂರಾರು ವರ್ಷಗಳ ಕಾಲ ಬದುಕಿ, ಬಾಳಿ ಇಂದಿಗೂ ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು. ನಿವೃತ್ತ ಉಪನ್ಯಾಸಕಿ ಯಶೋದಮ್ಮ ಹೆಚ್. ಅವರು, ವಿದ್ಯಾರ್ಥಿಗಳ ಬದುಕಿಗೆ ಮತ್ತು ಸಾರ್ಥಕತೆಗೆ ಯೋಗದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸೌಮ್ಯಶ್ರೀ ಕೆ.ಜೆ, ದಿನೇಶ್ ಹೆಚ್.ಆರ್., ಪ್ರಧಾನ ಗುರುಮಾತೆ ವಂದನಾ ಬಾನಾವಳಿಕರ, ಸಹ ಶಿಕ್ಷಕರಾದ ಸವಿತಾ ಮಡಿವಾಳರ, ಮಂಜುಳಾ ಬಣಕಾರ, ಗಾಯತ್ರಿ ಭರತ, ಶ್ರುತಿ, ಸಂಗೀತಾ ಕುಲಕರ್ಣಿ,ಲೀನಾ, ನಾಗರತ್ನ ಹುಲ್ಲತ್ತಿ, ರೂಪ ಸಿರಿಗೆರ, ಶೋಭಾ ಪಾಟೀಲ, ವೀಣಾ ಪುರಾಣಿಕ, ಪ್ರವೀಣ ಮಡಿವಾಳರ, ಚಂದ್ರಶೇಖರ ದೊಡ್ಲಿ ಸೇರಿದಂತೆ ಮತ್ತಿತರ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 