ಸಾವಳಸಂಗ ಗ್ರಾಮಕ್ಕೆ ಭೇಟಿ ನೀಡಿದ ಯಶವಂತರಾಯಗೌಡ

ಸಾವಳಸಂಗ ಗ್ರಾಮಕ್ಕೆ ಭೇಟಿ ನೀಡಿದ ಯಶವಂತರಾಯಗೌಡ Yashwantha Rayagowda visits Savalasanga village

ಲೋಕದರ್ಶನ ವರದಿ 

 ಇಂಡಿ 23 :  ಇತ್ತೀಚೆಗೆ ತಾಲೂಕಿನ ಸಾವಳಸಂಗ ಗ್ರಾಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವೃಕ್ಷೆ ಉಧ್ಯಾನದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ 3 ಸಾವಿರಕ್ಕೂ ಅಧಿಕ ಗಿಡಗಳು ಸುಟ್ಟಿದ್ದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಶುಕ್ರವಾರ ಸಾಯಂಕಾಲ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಿ. ಪರಿಸತ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಶೀಘ್ರದಲ್ಲೇ ಮತ್ತೆ ಮರಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಮಾಡಬೇಕು.

ಅರಣ್ಯ ಅಭಿವೃಧ್ಧಿಗೆ ಎಲ್ಲರೂ ಕೈ ಜೋಡಿಸಿ, ಸಿದ್ದೇಶ್ವರ ಶ್ರೀಗಳು ನಡೆದಾಡಿದ ಈ ಪುಣ್ಯ ಭೂಮಿಯನ್ನು ಬೃಹತ್ ಅರಣ್ಯ ವೃಕ್ಷೆ ಉಧ್ಯಾನದಲ್ಲಿ ಧ್ಯಾನವನ್ನಾಗಿಸಿ ಅಭಿವೃಧ್ಧಿಪಡಿಸೋಣ ಎಂದರು.ಈ ಸಂದರ್ಭದಲ್ಲಿ ಇಂಡಿ ತಹಸೀಲ್ದಾರ ಬಿ.ಎಸ್‌. ಕಡಕಭಾವಿ, ಡಿ.ವೈ.ಎಸ್‌.ಪಿ ಸದಾಶಿವ ಕಟ್ಟೀಮನಿ, ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಪ್ಪ ಏವೂರ, ಅರಣ್ಯ ಅಧಿಕಾರಿಗಳಾದ ಮಂಜುನಾಥ ಧೂಳೆ, ಎಸ್‌.ಜಿ. ಸಂಗಾಲಕ, ಸುನಿಲ್ ಜಂಗಮಶೆಟ್ಟಿ, ಲೋಕೋಪಯೋಗಿ ಅಧಿಕಾರಿ ದಯಾನಂದ ಮಠ, ಸಿಪಿಐ ಸುನೀಲ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.