ಎಸ್‌. ಡಿ. ಎಂ. ಸಿ ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ, ಆಯ್ಕೆ

ಎಸ್‌. ಡಿ. ಎಂ. ಸಿ  ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ,  ಆಯ್ಕೆ Yamanappa Siddapura elected as S. D. M. C president

ರನ್ನ ಬೆಳಗಲಿ   12: ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಸಿದ್ದಾಪೂರ ತೋಟ ನಂಬರ 2ರ ಶಾಲೆಯಲ್ಲಿ ಸೋಮವಾರ ದಂದು ನೂತನ ಎಸ್ ಡಿ ಎಮ್ ಸಿ ಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯಮನಪ್ಪ ಸಿದ್ದಾಪುರ ಹಾಗೂ ಉಪಾಧ್ಯಕ್ಷರಾಗಿ ಸುನೀತಾ ಹಡಪದ ರವರು ಆಯ್ಕೆಯಾದರು.

ಈ ನೂತನ ಎಸ್ ಡಿ ಎಮ್ ಸಿ ರಚಿಸಲು  ವಿ. ಎಸ್ ಉಪ್ಪಿನ ಬಿ.ಆರಿ​‍್ಪ ಮತ್ತು ಬಸವರಾಜ ಬಳ್ಳಾರಿ ಸಿ. ಆರಿ​‍್ಪ ಇರ್ವ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.ನೂತನ ಎಸ್‌.ಡಿ.ಎಮ್‌.ಸಿ ಆಡಳಿತ ಮಂಡಳಿಗೆ ಪ.ಪಂ ಸದಸ್ಯಳಾದ ಗೌರವ್ವ ಅಮಾತಿ,ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ ಸಿದ್ದಾಪುರ, ಸಂಗಪ್ಪ ಅಮಾತಿ,ಸುರೇಶ ಹಿಪ್ಪರಗಿ, ಹನುಮಂತಗೌಡ ಗುಂಜಿಗಾಂವಿ,ಮಹಾಲಿಂಗಪ್ಪ ಹಿಪ್ಪರಗಿ, ಮುತ್ತಪ್ಪ ಹಿಪ್ಪರಗಿ, ಕರೆಪ್ಪ ಕುಂಬಾಳಿ,ಹಣಮಂತ ಹೊಸೂರ, ಮಲ್ಲಪ್ಪ ಸಿದ್ದಾಪೂರ,ಯಮನಪ್ಪ ಚಂದಪ್ಪನವರ, ತಿಪ್ಪಣ್ಣ ಖಾಕಂಡಕಿ, ಪರಮಾನಂದ ಹೊರಗಿನಮನಿ, ಸಂಗಪ್ಪ ಗರಗದ,ಕಲ್ಲಪ್ಪ ಹೊಸಟ್ಟಿ, ಸತ್ಯಪ್ಪ ಸಿದ್ದಾಪೂರ.ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ಮಾಳಿ,ಶಿಕ್ಷಕ ವೃಂದ, ಪಾಲಕ ಪೋಷಕರು ಮತ್ತು ಶಿಕ್ಷಣ ಅಧಿಕಾರಿಗಳು ಶುಭ ಕೋರಿ ಅಭಿನಂದಿಸಿದರು.