ಪೂಜೆ ಬದುಕಿನ ಆನಂದಕ್ಕೆ ಕಾರಣ: ಶ್ರೀ ಮಹಾಂತ ಸ್ವಾಮೀಜಿ
ಚಿತ್ರದುರ್ಗ 22: ವಿಶ್ವಗುರು ಬಸವಣ್ಣನವರು ಸಂಶೋಧಿಸಿರುವ ಇಷ್ಟಲಿಂಗ ಪೂಜೆ ಬದುಕಿನ ಆನಂದಕ್ಕೆ ಕಾರಣವಾಗಿದೆ ಎಂದು ಶಿರಸಂಗಿ ಶ್ರೀ ಮಹಾಂತ ಸ್ವಾಮೀಜಿಯವರು ತಿಳಿಸಿದರು.
ಶ್ರೀಗಳು ಶರಣ ಸಂಸ್ಕೃತಿ ಉತ್ಸವ 2025ರ ನಿಮಿತ್ತ ಶ್ರೀಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಮೂರನೇ ದಿನದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುತ್ತ ಮಾತನಾಡಿ, ಶಿವಯೋಗದಿಂದಾಗುವ ಲಾಭಗಳನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಅರಿವಿಲ್ಲದೆ ಅರ್ಚನೆ ಮಾಡಿದರೆ ಆನಂದ ಪಡೆಯಲು ಸಾಧ್ಯವಿಲ್ಲ, ಅರಿವಿನ ಗುರು ಎಂಬುದನ್ನು ಹೊಂದಲು ಪ್ರೀತಿಯ ವರವನ್ನು ಪಡೆಯಬೇಕು. ನೆಮ್ಮದಿ, ಸಮಾಧಾನ, ಶಾಂತಿಯಿಂದ ಜೀವನ ಮಾಡಬೇಕೆಂದು ಎಲ್ಲರು ಬಯಸುತ್ತಾರೆ. ಸಂಪತ್ತು ಸಮಾಧಾನದ ಜೊತೆಗೆ ಅಪತ್ತನ್ನು ಒದಗಿಸುತ್ತದೆ. ಅದನ್ನು ತಿಳಿದುಕೊಂಡು ಜೀವನ ಮಾಡುವ ಅಗತ್ಯವಿದೆ. ಪೂಜೆ ಮಾಡಿ ಪಾವನವಾಗುವುದರಲ್ಲಿ ಬಯಲಾಗುವುದೆ ಅರಿವು. ಏನೇ ಕಾಯಕ ಮಾಡಿದರು ಸಂತೋಷ ಪಡೆಯಬೇಕಾದರೆ, ಈ ಮೂರು ಅಂಶಗಳನ್ನು ಮನದಲ್ಲಿಟ್ಟುಕೊಳ್ಳಬೇಕು. ಗೌರವ, ಪ್ರೀತಿ ಮತ್ತು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಸಂತೋಷ ಪಡೆಯಬಹುದು. ಮಾಡುವ ಕಾರ್ಯ ಸಣ್ಣದು ಎಂದು ಭಾವಿಸದೇ ತಾವು ಮಾಡುವ ಕಾರ್ಯ ಶ್ರೇಷ್ಠ ಎಂದು 12 ನೇ ಶತಮಾನದಲ್ಲಿಯೇ ಶರಣರು ತಿಳಿಸಿದ್ದಾರೆ.
ಪ್ರೀತಿಯಿಂದ ಯಾವುದೇ ಕಾರ್ಯ ಮಾಡಿದರೂ ಅದು ಸಾರ್ಥಕವಾಗುತ್ತದೆ. ಸಿಟ್ಟಿನಿಂದ ಅಡುಗೆ ಮಾಡಿದರೆ ಅದು ರುಚಿಸುವುದಿಲ್ಲ. ಆದ್ದರಿಂದ ಯಾವುದೇ ಕಾರ್ಯವನ್ನು ಮಾಡಿದರು ಅದು ಅಚ್ಚುಕಟ್ಟಾಗಿರಬೇಕು, ಒಲವಿಲ್ಲದ ಪೂಜೆ ಸಾರವಿಲ್ಲದ ಮಾತು ಎರಡೂ ವ್ಯರ್ಥ. ಇಷ್ಟಲಿಂಗ ಪೂಜೆಯನ್ನು ಮಾಡುವ ಮೂಲಕ ನಾವು ಧನ್ಯರಾಗೋಣ. ಒಲವೇ ಜೀವನ ಸಾಕ್ಷತ್ಕಾರ ಎಂಬಂತೆ ಶರಣಸತಿ ಲಿಂಗಪತಿ ಎಂಬ ಅಕ್ಕಮಹಾದೇವಿಯವರ ಮಾತು ಅತ್ಯುತ್ತಮವಾದುದು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಶರಣೆ ಸತ್ಯಕ್ಕ, ಹರಗುರು ಚರಮೂರ್ತಿಗಳು, ರುದ್ರಮೂರ್ತಿ, ಸದ್ಭಕ್ತರು ಉಪಸ್ಥಿತರಿದ್ದರು.
ಜಮುರಾ ಕಲಾಲೋಕದ ಉಮೇಶ ಪತ್ತಾರ ರಿಂದ ವಚನಗೀತೆಯ ನಡೆಸಿಕೊಟ್ಟರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 