ದೇವರನ್ನು ಪೂಜಿಸಿ - ಹಾಲನ್ನು ದೇವರ ಸಮಾನವಾದ ಮಕ್ಕಳಿಗೆ ನೀಡಿ : ಗಾಜಿಯವರ
ಲೋಕದರ್ಶನ ವರದಿ
ಶಿಗ್ಗಾವಿ 17: ದೇವರಿಗೆ ಪೂಜಿಸಿ ವಂದಿಸಿ ಆದರೆ ಹಾಲು ಪೌಷ್ಟಿಕ ಆಹಾರ ಅಮೃತ ಸಮಾನ ಅದನ್ನು ನಾಗದೇವರ ಮೂತರ್ಿಗೆ ಎರೆದು ವ್ಯರ್ಥ ಮಾಡದೆ, ಮಕ್ಕಳೂ ದೇವರ ಸಮಾನ ಅವರಿಗೆ ನೀಡಿ ಸದೃಢ ಸಮಾಜ ನಿಮರ್ಿಸಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರುಶರಾಮ ಗಾಜಿಯವರ ಹೇಳಿದರು.
ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರ ಪಂಚಮಿ ಹಾಗೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಕ್ಕಳಿಗೆ ರೋಗಿಗಳಿಗೆ ಹಾಲು, ಬಿಸ್ಕಿಟ್, ಬಾಳೇಹಣ್ಣು ಹಂಚಿ ಮಾತನಾಡಿದ ಅವರು, ಎಷ್ಟೋ ಮಕ್ಕಳು ತಾಯಂದಿರು ಅಪೌಷ್ಟಿಕತೆಯಿಂದ ರಕ್ತದ ಕೊರತೆ ಅನುಭವಿಸುತ್ತಿದ್ದಾರೆ ದೇವರಿಗೆ ಎರೆಯುವ ಹಾಲನ್ನು ಅಂತವರಿಗೆ ನೀಡಿ ದೇವರ ಆಶಿವರ್ಾದಕ್ಕೆ ಪಾತ್ರರಾಗಿ ಎಂದು ಸಲಹೆ ನೀಡಿದರು.
ರಾಜ್ಯ ಗುಪ್ತ ವಾತರ್ೆ ಘಟಕ ಶಿಗ್ಗಾಂವನ ಎಮ್.ಎಸ್.ಶಿವಣ್ಣವರ ಮಾತನಾಡಿ, ದೇವರನ್ನು ಶುದ್ದ ಮನಸ್ಸಿನಿಂದ ನೆನೆದು ಹಾಲು ಹಣ್ಣುಗಳನ್ನು ಅನಾಥ ಮಕ್ಕಳು ಬಡವರು ಹಾಗೂ ರೋಗಿಗಳಿಗೆ ದಾನಮಾಡಿ ದೇವರ ಆಶಿವರ್ಾದಕ್ಕೆ ಪಾತ್ರರಾಗಿ ಎಂದರು.
ಭ್ರಷ್ಟಾಚಾರ ನಿರ್ಮೂಲನಾ ಹಾಗೂ ಮಾನವ ಹಕ್ಕುಗಳ ಸಂಸ್ಥೆಯ ತಾಲೂಕ ಅಧ್ಯಕ್ಷ ಅಶೋಕ ಕಾಳೆ ಹಾಗೂ ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಜೈ ಕರುನಾಡ ವೇದಿಕೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಂಕಾರ ನೆತೃತ್ವದಲ್ಲಿ ಮಕ್ಕಳಿಗೆ ರೋಗಿಗಳಿಗೆ ಹಾಲು, ಬಿಸ್ಕಿಟ್, ಬಾಳೇಹಣ್ಣು ಹಂಚಿದರು.
ಆಸ್ಪತ್ರೆಯ ತಜ್ಞ ವೈದ್ಯರಾದ ಡಾ|| ಗುರುರಾಜ, ಮಂಜುನಾಥ ವಡ್ಡರ, ರಾಜೇಸಾಬ, ಪ್ರಭು ಕುರಂದವಾಡ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 