ದೇವರನ್ನು ಪೂಜಿಸಿ - ಹಾಲನ್ನು ದೇವರ ಸಮಾನವಾದ ಮಕ್ಕಳಿಗೆ ನೀಡಿ : ಗಾಜಿಯವರ
ಲೋಕದರ್ಶನ ವರದಿ
ಶಿಗ್ಗಾವಿ 17: ದೇವರಿಗೆ ಪೂಜಿಸಿ ವಂದಿಸಿ ಆದರೆ ಹಾಲು ಪೌಷ್ಟಿಕ ಆಹಾರ ಅಮೃತ ಸಮಾನ ಅದನ್ನು ನಾಗದೇವರ ಮೂತರ್ಿಗೆ ಎರೆದು ವ್ಯರ್ಥ ಮಾಡದೆ, ಮಕ್ಕಳೂ ದೇವರ ಸಮಾನ ಅವರಿಗೆ ನೀಡಿ ಸದೃಢ ಸಮಾಜ ನಿಮರ್ಿಸಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರುಶರಾಮ ಗಾಜಿಯವರ ಹೇಳಿದರು.
ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರ ಪಂಚಮಿ ಹಾಗೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಕ್ಕಳಿಗೆ ರೋಗಿಗಳಿಗೆ ಹಾಲು, ಬಿಸ್ಕಿಟ್, ಬಾಳೇಹಣ್ಣು ಹಂಚಿ ಮಾತನಾಡಿದ ಅವರು, ಎಷ್ಟೋ ಮಕ್ಕಳು ತಾಯಂದಿರು ಅಪೌಷ್ಟಿಕತೆಯಿಂದ ರಕ್ತದ ಕೊರತೆ ಅನುಭವಿಸುತ್ತಿದ್ದಾರೆ ದೇವರಿಗೆ ಎರೆಯುವ ಹಾಲನ್ನು ಅಂತವರಿಗೆ ನೀಡಿ ದೇವರ ಆಶಿವರ್ಾದಕ್ಕೆ ಪಾತ್ರರಾಗಿ ಎಂದು ಸಲಹೆ ನೀಡಿದರು.
ರಾಜ್ಯ ಗುಪ್ತ ವಾತರ್ೆ ಘಟಕ ಶಿಗ್ಗಾಂವನ ಎಮ್.ಎಸ್.ಶಿವಣ್ಣವರ ಮಾತನಾಡಿ, ದೇವರನ್ನು ಶುದ್ದ ಮನಸ್ಸಿನಿಂದ ನೆನೆದು ಹಾಲು ಹಣ್ಣುಗಳನ್ನು ಅನಾಥ ಮಕ್ಕಳು ಬಡವರು ಹಾಗೂ ರೋಗಿಗಳಿಗೆ ದಾನಮಾಡಿ ದೇವರ ಆಶಿವರ್ಾದಕ್ಕೆ ಪಾತ್ರರಾಗಿ ಎಂದರು.
ಭ್ರಷ್ಟಾಚಾರ ನಿರ್ಮೂಲನಾ ಹಾಗೂ ಮಾನವ ಹಕ್ಕುಗಳ ಸಂಸ್ಥೆಯ ತಾಲೂಕ ಅಧ್ಯಕ್ಷ ಅಶೋಕ ಕಾಳೆ ಹಾಗೂ ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಜೈ ಕರುನಾಡ ವೇದಿಕೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಂಕಾರ ನೆತೃತ್ವದಲ್ಲಿ ಮಕ್ಕಳಿಗೆ ರೋಗಿಗಳಿಗೆ ಹಾಲು, ಬಿಸ್ಕಿಟ್, ಬಾಳೇಹಣ್ಣು ಹಂಚಿದರು.
ಆಸ್ಪತ್ರೆಯ ತಜ್ಞ ವೈದ್ಯರಾದ ಡಾ|| ಗುರುರಾಜ, ಮಂಜುನಾಥ ವಡ್ಡರ, ರಾಜೇಸಾಬ, ಪ್ರಭು ಕುರಂದವಾಡ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 