ಕಾರಡಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
World Environment Day celebrated at Karadagi Government Higher Primary School
ಸವಣೂರ 06 : ತಾಲೂಕಿನ ಕಾರಡಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು .ವಿಶ್ವ ಪರಿಸರ ದಿನಾಚರಣೆ ಕುರಿತು ಮುಖ್ಯೋಪಾಧ್ಯಾಯ ಎಫ್ ಆರ್ ಹಿರೇಮಠ ಮಾತನಾಡಿ ಇವತ್ತಿನ ಹವಾಮಾನ ವೈಪರಿತ್ಯಕ್ಕೆ ಕಾಡು ನಾಶವಾಗಿರುವುದೇ ಕಾರಣ.ಆದ್ದರಿಂದ ಶಾಲೆಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ/ನಿ ಒಂದೊಂದು ಸಸಿ ನೆಟ್ಟು ಅದನ್ನು ಪೋಷಿಸಬೇಕು. ಇದರಿಂದ ಊರಿಗೊಂದು ವನ ನಿರ್ಮಾಣವಾಗಿ ಉತ್ತಮ ಪರಿಸರ ಆಗಲು ಸಹಾಯವಾಗುತ್ತದೆ.
ಕಾಡು ಬೆಳೆದರೆ ನಾಡು,ಹಸಿರು ಇದ್ದರೆ ಉಸಿರು ಎನ್ನುವ ಗಾದೆ ಮಾತು ಕುರಿತು ಸವಿಸ್ತಾರವಾಗಿ ಮಕ್ಕಳಿಗೆ ತಿಳಿಸಿದರು. ಸಸಿ ನೆಡುವ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಾದ ಸುರೇಶ.ಕುರವತ್ತಿ, ಸಿದ್ದಯ್ಯ.ಪೂಜಾರ ಮತ್ತು ಶಿಕ್ಷಕರಾದ ಶ್ರೀಮತಿ ಜಿ.ಎನ್.ಪಾಟೀಲ,ಎ.ವ್ಹಿ ಬನ್ನಿಕಲ್, ಎಮ್.ಎಚ್.ಮಾದರ,ಎಸ್.ಬಿ.ದೊಡ್ಡಮನಿ,ಯಶೋಧಾ.ಆರ್.ಎಚ್.,ಮೇಘಾ.ಡಿ.ಹರ್ತಿ,ಮಹಾದೇವಿ.ಡಿ.ಸವಣೂರ,ರೂಪಾ.ಶಂ.ತೊಂಡೂರ,ಅಡುಗೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 