ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಕಾರ್ಯಕ್ರಮ

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಕಾರ್ಯಕ್ರಮ World Day Against Child Labor Programme

ಧಾರವಾಡ, 15 ; ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ದಿ. ಜು 15ರಂದು ಕೆ.ಎನ್‌.ಕೆ ಗರ್ಲ್ಸ್‌ ಹೈಸ್ಕೂಲ್, ಕಿಲ್ಲಾ, ಧಾರವಾಡ ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಶಾಲಾ ಶಿಕ್ಷಣ ಇಲಾಖೆ,  ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಕೆ.ಎನ್‌.ಕೆ ಗರ್ಲ್ಸ್‌ ಹೈಸ್ಕೂಲ್ ಧಾರವಾಡ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚಾರಣೆ ಅಂಗವಾಗಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಬಾಲಕಾರ್ಮಿಕ ಪದ್ಧತಿ ನಿಷೇಧದ ಕುರಿತು ಜಾಗೃತಿ ಮೂಡಸಲು ಜಾಥಾ ಆಯೋಜನೆ ಮಾಡಲಾಗಿತ್ತು, ಈ ಕಾರ್ಯಕ್ರಮಕ್ಕೆ ಪರಶುರಾಮ ಎಫ್‌. ದೊಡ್ಡಮನಿ ಮಾನ್ಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ರವರು ಜಾಥಕ್ಕೆ ಚಾಲನೆ ನೀಡಿದರು, ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ನೇರೆವೆರಿಸಿ ಉದ್ಘಾಟನಾ ಭಾಷಣದಲ್ಲಿ ಮಕ್ಕಳನ್ನು ದುಡಿಮೆಗೆ ಕಳುಹಿಸಬಾರದು, ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ, ಯಾವುದೇ ಮಕ್ಕಳು ಸಮಸ್ಯೆಗೆ ಒಳಗಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಬಹುದೆಂದು ತಿಳಿಸಿದರು. 

ಈ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿ ಮಾತನಾಡಿದ ಶ್ರೀಮತಿ. ದಿವ್ಯ ಪ್ರಭು ಜಿ.ಆರ್‌.ಜೆ ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ, ಪೋಷಕರು ಬಡತನವೆಂದು ಮಕ್ಕಳನ್ನು ದುಡಿಮೆಗೆ ಹಚ್ಚಬಾರದು ಹಾಗೂ ಮಾಲೀಕರು ಮಕ್ಕಳನ್ನು ಕೆಲಕ್ಕೆ ನೇಮಿಸಿಕೊಳ್ಳಬಾರದು, ಇದು ಬೆಳೆಯುವ ಪೈರನ್ನು ಮೊಳಕೆಯಲ್ಲಿ ಚುಟಿದಂತಾಗುತ್ತದೆ, ಹಾಗೂ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರೆಯುತ್ತದೆ, ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಉಲ್ಲಂಘನೆಯಾಗಬಾರದು, ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಎಲ್ಲರು ಕೈಜೋಡಿಸಬೇಕು, ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕೆಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಚಿನ ಯ. ಹಳೇಮನಿ ಸಹಾಯಕ ಕಾರ್ಮಿಕ ಆಯುಕ್ತರು ಸಭೆಯಲ್ಲಿ ಸೇರಿದ ಅಂಗಡಿ, ವಾಣಿಜ್ಯ, ಸಂಸ್ಥೆಯ ಮಾಲೀಕರಿಗೆ ಮತ್ತು ಶಾಲಾ ಮಕ್ಕಳಿಗೆ ಬಾಲಕಾರ್ಮಿಕ ಪದ್ಧತಿ ವಿರೋಧಿ ಪ್ರತಿಜ್ಞಾ ವಿಧಿಯನ್ನು ಭೊದಿಸಿದರು . 

ಹೆಚ್ಚು ಬಾಲಕಾರ್ಮಿಕ ಪ್ರಕರಣ ದಾಖಲಿಸಿದ ಹಿರಿಯ ಕಾರ್ಮಿಕ ನೀರೀಕ್ಷಕರಾದ ಅಶೋಕ ವಡೆಯರ ಮ್ತತು ಅಕ್ರಮ ಅಲ್ಲಾಪುರ ಇವರಿಗೆ ಸನ್ಮಾನಿಸಲಾಯಿತು. ಮತ್ತು ಪ್ರಬಂಧ ಮ್ತತು ಚಿತ್ರಕಲೆ ಸ್ಪರ್ಧೆಯಲ್ಲಿ  ಆಯ್ಕೆಯಾದ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ನಾರಾಯಾಣ. ಬರಮನಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ಸಚಿನ ಕಾಡದೆವರಮಠ ಸಿ.ಪಿ.ಐ, ಬಿ.ವಾಯ್‌.ಪಾಟೀಲ್, ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ, ದೀಪಾ ಜಾವುರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಎಸ್,ಎಸ್, ಕೆಳದಿಮಠ ಉಪನಿರ್ದೇಶಕರು ಶಾಲ ಶಿಕ್ಷಣ ಇಲಾಖೆ, ಕಾರ್ಮಿಕ ಅಧಿಕಾರಿಗಳಾದ ಮಾರಿಕಾಂಬಾ ಹುಲಕೋಟಿ, ಅಕ್ಬರ ಮುಲ್ಲಾ, ಸುಜಾತಾ ಬಾಸೂರ ಮುಖ್ಯೋಪಾಧಾಯರು ಕೆ.ಎನ್‌.ಕೆ ಗರ್ಲ್ಸ್‌ ಹೈಸ್ಕೂಲ್ ಕಿಲ್ಲಾ, ಧಾರವಾಡ, ಅಶೋಕ ಸಿಂಧಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹಾಗೂ ಹಿರಿಯ ಕಾರ್ಮಿಕ ನೀರೀಕ್ಷಕರುಗಳಾದ ಅಶೋಕ ವಡೆಯರ, ಅಕ್ರಮ ಅಲ್ಲಾಪುರ, ಸಂಗೀತಾ ಬೆನಕನಕೊಪ್ಪ, ರಜನಿ ಹಿರೇಮಠ,  ಮಿನಾಕ್ಷಿ ಸಿಂದಹಟ್ಟಿ, ಹಾಗೂ ಬಸವರಾಜ ಪಂಚಾಕ್ಷರಿಮಠ ಯೋಜನಾ ನಿರ್ದೇಶಕರು ಜಿಲ್ಲಾ ಬಾಲ ಬಾಲಕಾರ್ಮಿಕ ಯೋಜನಾ ಸೊಸೈಟಿ ಧಾರವಾಡ, ಹಾಗೂ ಕಛೇರಿ ಸಿಬ್ಬಂದಿಗಳು ಭಾಗವಹಿಸಿದ್ದರು. 

ಸಭೆಯಲ್ಲಿ ವಿಜಯಕುಮಾರ ಕರಿಕಟ್ಟಿ ನಿರೂಪಿಸಿದರು, ಅಕ್ಬರ ಮುಲ್ಲಾ ಸ್ವಾಗತಿಸಿದರು, ಹಾಗೂ ಬಸವರಾಜ ಪಂಚಾಕ್ಷರಿಮಠ ಇವರು ವಂದನಾರೆ​‍್ಣಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.