ವಿಶ್ವ ಚಾಂಪಿಯನ್ ಶಿಪ್: ಪ್ರೀ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಶ್ರೀಕಾಂತ್
`ನಾಂಜಿಂಗ್ : ಬಿಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ ಶಿಫ್ ನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್ ನ ಪ್ಯಾಬ್ಲೊ ಅಬಿಯಾನ್ ವಿರುದ್ಧ ಮೂರು ಗೇಮಿನ ಪಂದ್ಯದಲ್ಲಿ ಹೋರಾಟ ನಡೆಸಿದ ಭಾರತದ ಕಿದಂಬಿ ಶ್ರೀಕಾಂತ್ ಪ್ರೀ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪ್ಯಾಬ್ಲೊ ವಿರುದ್ಧ 62 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 21-15, 12-21-14 ಅಂತರದಿಂದ ಐದನೇ ಶ್ರೇಯಾಂಕದ ಭಾರತೀಯ ಆಟಗಾರ ಕಿದಂಬಿ ಶ್ರೀಕಾಂತ್ ಪ್ರಬಲ ಹೋರಾಟ ನಡೆಸಿದರು.
ಕಳೆದ ವರ್ಷ ಶ್ರೀಕಾಂತ್ ನಾಲ್ಕು ಬಾರಿ ಪ್ರಶಸ್ತಿ ಪಡೆದಿದ್ದರು. 2012ರಲ್ಲಿ ಫ್ರೆಂಚ್ ಒಪನ್ ಸಿರಿಸ್ ನಲ್ಲಿ ಗೆದ್ದಿದ್ದ ಮಾಜಿ ಹತ್ತನೇ ಶ್ರೇಯಾಂಕ ಆಟಗಾರ ಮಲೇಷಿಯಾದ ಡೆರೆನ್ ಲಿವು ವಿರುದ್ಧ ಶ್ರೀಕಾಂತ್ ಗೆಲುವು ಸಾಧಿಸಿದ್ದರು.
ಶ್ರೀಕಾಂತ್ ಆರಂಭಿಕ ಪಂದ್ಯಗಳಲ್ಲಿ 16-13 ರಿಂದ ಮುನ್ನಡೆ ಕಾಯ್ದುಕೊಳ್ಳುವ ಮುನ್ನಾ 2-4 ಮತ್ತು 6-8 ಕೊರತೆಗಳನ್ನು ಅನುಭವಿಸಿದ್ದರು. ನಂತರ ಪ್ರಬಲ ಹೋರಾಟದ ಮೂಲಕ
ನಾಲ್ಕು ಅಂಕಗಳಿಂದ ಪ್ಯಾಬ್ಲೊ ಅವರನ್ನು ಹಿಮ್ಮೆಟ್ಟಿಸಿದರು. ಪ್ಯಾಬ್ಲೊ ಚೇತರಿಸಿಕೊಳ್ಳಲು ಯತ್ನಿಸಿದ್ದರಾದರೂ ಅದಕ್ಕೆ ಭಾರತದ ಆಟಗಾರ ಅವಕಾಶ ಮಾಡಿಕೊಡಲಿಲ್ಲ.
ಎರಡನೇ ಪಂದ್ಯದಲ್ಲಿ, ಶ್ರೀಕಾಂತ್ 6-3 ಮುನ್ನಡೆ ಸಾಧಿಸಿದ್ದರು ಆದರೆ ಪಬ್ಲೊ ಆರು ಪಾಯಿಂಟ್ಗಳ ಮೇಲೆ ಮುಂದಕ್ಕೆ ಸಾಗಿದರು. ಶ್ರೀಕಾಂತ್ 10-12 ರಲ್ಲಿದ್ದರೆ, ಸ್ಪೇನ್ ಆಟಗಾರ ಏಳು ಅಂಕಗಳಿಂದ ಮುಂದಿದ್ದರು.
ನಿಣರ್ಾಯಕ ಪಂದ್ಯದಲ್ಲಿ, ಬ್ಯಾಬ್ಲೊ 11-9 ಅಂಕಗಳನ್ನು ಪಡೆದು ಅನುಕೂಲ ಮಾಡಿಕೊಂಡಿದ್ದರು. ಆದರೆ ವಿರಾಮದಲ್ಲಿ ಶ್ರೀಕಾಂತ್ ಪುಟಿದೆದ್ದು, ಸ್ಪೇನ್ ಆಟಗಾರ ಪುಟಿದೇಳದಂತೆ ಮಾಡುವ ಮೂಲಕ ಫ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 