ವಿಶ್ವ ಸ್ತನಪಾನ ಸಪ್ತಾಹ ದಿನ : ತಾಯಿಯ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ
World Breastfeeding Week: Mother's breast milk is like nectar for a baby
ವಿಶ್ವ ಸ್ತನಪಾನ ಸಪ್ತಾಹ ದಿನ : ತಾಯಿಯ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ
ಬಳ್ಳಾರಿ 7: ರಂದು ನಗರದಲ್ಲಿ ವಿಶ್ವ ಸ್ತನಪಾನ ಸಪ್ತಾಹ (ಆಗಸ್ಟ್ 1 ರಿಂದ 7) ದಿನಗಳ ಆಚರಣೆಯ ಭಾಗವಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ (ಈಕಂಋ), ಬಳ್ಳಾರಿ ಶಾಖೆ, ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಿಂದ ವಿವಿಧ ಜಾಗೃತಿ ಹಾಗೂ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.ಇಂದು ಸರ್ಕಾರಿ ಆಸ್ಪತ್ರೆ, ರಾಜ್ಯೋತ್ಸವ ನಗರ, ಬಳ್ಳಾರಿಯಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರು ಸ್ತನಪಾನ ಸಂಬಂಧಿತ ಮಾಹಿತಿ ಮತ್ತು ಆರೋಗ್ಯ ಸೇವಾ ಶಿಬಿರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಸೌಜನ್ಯ, ವೈದ್ಯಾಧಿಕಾರಿ, “ತಾಯಿಯ ಎದೆಹಾಲು ಮಗುವಿಗೆ ಮೊದಲ 6 ತಿಂಗಳುಗಳವರೆಗೆ ಪೂರ್ಣ ಆಹಾರವಾಗಿದೆ. ಸರಿಯಾದ ವಿಧಾನದಲ್ಲಿ ಸ್ತನಪಾನ ಮಾಡುವ ಮೂಲಕ ಮಗುವಿಗೆ ಉತ್ತಮ ಆರೋಗ್ಯ ನೀಡಬಹುದು,” ಎಂದು ವಿವರಿಸಿದರು.ಈಕಂಋ ಬಳ್ಳಾರಿ ಶಾಖೆಯ ಕಾರ್ಯಕ್ರಮಾಧಿಕಾರಿ ಬಸವರಾಜ ಮಾತನಾಡುತ್ತಾ, ಸಂಸ್ಥೆಯ ಆರೋಗ್ಯ ಸೇವೆಗಳ ಬಗ್ಗೆ ಹಾಗೂ ಗರ್ಭಕೋಶದ ಕ್ಯಾನ್ಸರ್ ಮತ್ತು ಊಕಗಿ ಲಸಿಕೆಯ ಮಹತ್ವದ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಒಟ್ಟಾರೆ 67 ಫಲಾನುಭವಿಗಳು ಭಾಗವಹಿಸಿದ್ದು, ಅವರಲ್ಲಿ 24 ಮಂದಿ ಂಓಅ (ಗರ್ಭಿಣಿಯರು) ಹಾಗೂ 27 ಮಂದಿ ಕಓಅ (ಬಾಣಂತಿಯರು) ಆಗಿದ್ದರು. ಜಾಗೃತಿಯ ನಂತರ ಪಾಲನುಭವಿಗಳಿಗೆ ಐರನ್, ಕ್ಯಾಲ್ಸಿಯಂ ಮಾತ್ರೆಗಳು ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನೀಡಲಾಯಿತು.ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಪಿಎಚ್ಸಿ ಶುಶ್ರೂಷಕಿ ಮಾಬುನ್ನಿ ಮತ್ತು ಆಶಾ ಶಿವಕುಮಾರಿ ಹಾಗೂ ಸಿಬ್ಬಂದಿಗಳ ಸಹಕಾರ ದೊರೆಯಿತು.ಈ ಕಾರ್ಯಕ್ರಮದ ಮೂಲಕ ತಾಯಂದಿರಲ್ಲಿ ಸ್ತನಪಾನದ ಬಗ್ಗೆ ಅರಿವು ಮೂಡಿಸಿ, ತಾಯಿ ಮತ್ತು ಮಗು ಅವರ ಆರೋಗ್ಯ ರಕ್ಷಣೆಗೆ ಪೂರಕವಾದ ಸೇವೆಗಳನ್ನು ಒದಗಿಸಲಾಯಿತು ಎಂದು ವಿಜಯ ಲಕ್ಷ್ಮಿ ಯವರು ಪತ್ರಿಕೆ ಪ್ರಕಟಣಿ ಗೆ ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 