ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕಾಲಿಟ್ಟ ಚಳಿಗಾಲ: ಆರೋಗ್ಯ ಕಾಳಜಿ ಅಗತ್ಯ
Winter sets in villages : Health care is essential
ವರದಿ: ಸಂತೋಷಕುಮಾರ ಕಾಮತ್
ಮಾಂಜರಿ 17: ಸತತ ಆರೂವರೆ ತಿಂಗಳಿಂದ ಮಳೆಗಾಲದ ತಂಪು ಆವರಿಸಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಎರಡು ದಿನಗಳಿಂದ ಚಳಿಗಾಲದ ತಂಗಾಳಿ ಬೀಸಲು ಶುರುವಾಗಿದೆ. ಈ ಹಸಿ, ಬಿಸಿ ಬೆಚ್ಚನೆ ವಾತಾವರಣದ ಜತೆಯಲ್ಲಿಯೇ ನೆಗಡಿ, ಕೆಮ್ಮು ಕಾಲಿಟ್ಟಿದೆ.
ಕೃಷ್ಣ ನದಿ ತೀರದ ಗ್ರಾಮಗಳಲ್ಲಿ ಸದ್ಯ ಗರಿಷ್ಠ ತಾಪಮಾನ 33.8 ಡಿಗ್ರಿ ಸೆಲ್ಸಿಯಸ್ ಇದೆ. ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಆಗಿದೆ. ವಾಡಿಕೆಗಿಂತ ಐದು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಾಲೂಕಿನಲ್ಲಿ ಕೆಲ ಮಡ್ಡಿ ಭಾಗದ ಗ್ರಾಮಗಳಲ್ಲಿ ಮಾತ್ರ ಗರಿಷ್ಠ ಕನಿಷ್ಠ ತಾಪಮಾನ ಒಂದೆರಡು ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ಆದರೆ, ಮಳೆಗಾಲದ ಇತರ ದಿನಗಳಿಗೆ ಹೋಲಿಸಿದರೆ, ಎಲ್ಲೆಡೆ ಕನಿಷ್ಠ ತಾಪಮಾನ ವಾಡಿಕೆಗಿಂತ ಇಳಿಕೆಯಾಗಿದೆ. ಚಳಿಗಾಲದ ಆರಂಭದ ಲಕ್ಷಣಗಳು ಶುರುವಾಗಿವೆ.
ಬೆಳಗ್ಗೆ ಮತ್ತು ಸಂಜೆ ತಂಪನೆ ವಾತಾವರಣ ಹೆಚ್ಚಾಗುತ್ತಿದ್ದು, ಒಣ ಹವೆಯ ಅನುಭವ ಆಗುತ್ತಿದೆ. ಈ ತಂಪು ಗಾಳಿಯಲ್ಲಿ ಮನೆಯೊಳಗಿನ ಬಿಸಿ ಬೆಚ್ಚನೆಯ ಅನುಭವ ಕೊಡುತ್ತಿದೆ. ವಾತಾವರಣ ಬದಲಾಗುತ್ತಿ ರುವ ಸಂದರ್ಭದಲ್ಲಿ ಸಹಜವಾಗಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಕಫ, ಗಂಟಲು ನೋವು, ನೆಗಡಿ, ಚರ್ಮ ಸುಕ್ಕುಗಟ್ಟುವ ತೊಂದರೆ ಸಾಮಾನ್ಯವಾಗುತ್ತಿದೆ. ಈಗಷ್ಟೇ ತಣ್ಣನೆಹವಾಮಾನ ಶುರುವಾಗಿದ್ದರಿಂದ ಸಮಸ್ಯೆ ತೀವ್ರವಾಗಿಲ್ಲ.ಮೇ ತಿಂಗಳಿಂದ ಶುರುವಾದ ಮಳೆ ಬಿಟ್ಟು
ಬಿಡದೆ ನವೆಂಬರ್ ಮೊದಲ ವಾರದ ವರೆಗೆ ಜನ ಕಿರಿಕಿರಿಗೆ ಒಳಗಾಗುವಂತಾಗಿತ್ತು. ಕಳೆದ ವರ್ಷ ಸುರಿಯುತ್ತಿದ್ದರಿಂದ ನವೆಂಬರ್ ತಿಂಗಳಲ್ಲಿಯೂ ಮಳೆ ಆವರಿಸಿ ಭತ್ತದ ಬೆಳೆ ನಾಶ ಆಗಿದ್ದವು. ಈ ವರ್ಷವೂ ಹಾಗೆ ಆಗಬಹುದೇನೋ ಎನ್ನುವ ಚಿಂತೆ ರೈತರನ್ನು ಕಾಡಿತ್ತು. ಎರಡು ದಿನಗಳಿಂದ ಚಳಿಗಾಳಿ ಬೀಸಲು ಶುರುವಾಗಿದ್ದರಿಂದ ಇನ್ನೇನು ಚಳಿಗಾಲ ಶುರುವಾಗುತ್ತಿದೆ ಎನ್ನುವ ಲಕ್ಷಣ ಗೋಚರಿಸುತ್ತಿದೆ.
ಆರೋಗ್ಯ ಕಾಳಜಿ ಅಗತ್ಯ: ಚಳಿಗಾಲದಲ್ಲಿ
ಒಣ ಹವೆ ಇರುವುದರಿಂದ ಅಲರ್ಜಿ, ವೈರಸ್ ಸೋಂಕಿನ ಅನಾರೋಗ್ಯಗಳು ಹೆಚ್ಚಾಗುತ್ತವೆ. ತುಟಿ ಒಣಗುವುದು, ಚರ್ಮ ಒಣಗಿದಂತಾಗಿ ಒಡೆಯುವುದು ಇನ್ನಿತರ ಸಮಸ್ಯೆ ಕಾಡುತ್ತವೆ. ವೃದ್ಧರು, ಮಕ್ಕಳ ಲ್ಲಿಯೂ ಅನಾರೋಗ್ಯ ಸಾಮಾನ್ಯವಾಗುತ್ತವೆ. ಹಾಗಾಗಿ ಇಂಥ ಸಂದರ್ಭದಲ್ಲಿ ಬಿಸಿ ನೀರು ಕುಡಿಯಬೇಕು. ರಾತ್ರಿ ಮತ್ತು ಮುಂಜಾನೆ ವಾಯು ವಿಹಾರವನ್ನು ಕಡಿಮೆ ಮಾಡಬೇಕು ಎನ್ನುವುದು ಆರೋಗ್ಯ ಇಲಾಖೆ ಸಲಹೆ. ರಾಜ್ಯದಲ್ಲಿ ಚಳಿ ವಾತಾವರಣ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಿಲ್ಲ. ಹಾಗಾಗಿ ಈ ಬಗ್ಗೆ ಸದ್ಯ ರಾಜ್ಯದಲ್ಲಿ ಯಾವುದೇ ಮುನ್ನೆಚ್ಚರಿಕೆ ಮಾರ್ಗಸೂಚಿ ಬಿಡುಗಡೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಚಳಿಗಾಲದಲ್ಲಿ ಹೇಗಿರಬೇಕು?
* ವಯಸ್ಸಾದವರು, ಮಕ್ಕಳು, ರೋಗಿಗಳ ಕಾಳಜಿ ಅಗತ್ಯ
* ಬಿಪಿ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ರೋಗಿಗಳು ಬೆಚ್ಚಗಿರಬೇಕು
* ಬಿಸಿಯಾದ ಊಟ, ಉಪಾಹಾರವನ್ನೇ ಸೇವಿಸಬೇಕು
* ಚಳಿ ವಾತಾವರಣದಲ್ಲಿ ಹೊರಗಡೆ ಹೋಗಬಾರದು.
* ಐಸ್ಕ್ರೀಮ್, ತಂಪು ಪಾನೀಯಗಳಿಂದ ದೂರ ಇರಬೇಕು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 