ವರದಕ್ಷಿಣೆ ಕಿರುಕುಳಕ್ಕೆ ಪತ್ನಿ ನೇಣಿಗೆ ಶರಣು : ಪ್ರಕರಣ ದಾಖಲು
Wife hangs herself for dowry harassment: Case registered
ಲೋಕದರ್ಶನ ವರದಿ
ಕಂಪ್ಲಿ 19: ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕವಾಗಿ ಮನನೊಂದು ಪತ್ನಿ ನೇಣಿಗೆ ಶರಣಾದ ಧಾರುಣ ಘಟನೆ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ನಡುವಲ ಮಸೀದಿ ಬಳಿಯಲ್ಲಿರುವ ತವರು ಮನೆಯಲ್ಲಿ ಐಶ್ವರ್ಯ(24) ಮೃತಪಟ್ಟ ದುರ್ಧೈವಿ. ಈ ಹಿಂದೆ ಸಿರಿಗೇರಿಯ ಪ್ರದೀಪ್ ಕುಮಾರ ಎಂಬ ನಿವಾಸಿಯನ್ನು ಕಂಪ್ಲಿಯ ಐಶ್ವರ್ಯ ರಿಜಿಸ್ಟರ್ ಮದುವೆಯಾಗಿದ್ದಳು. ನಂತರ ಕುರುಗೋಡು ಪಟ್ಟಣದಲ್ಲಿ ದಾಂಪತ್ಯ ಜೀವನ ನಡೆಸುತ್ತಾ ಬಂದಿದ್ದಾರೆ. ಇದೇ ಮೇ.14ರಂದು ಐಶ್ವರ್ಯಳನ್ನು ಪತಿರಾಯ ಮನೆ ಹೊರಗಡೆಯಲ್ಲಿ ಬಿಟ್ಟು ಕುರುಗೋಡಿಗೆ ಮರಳಿದ್ದಾನೆ. ಮೇ.17ರಂದು ಮಧ್ಯಾಹ್ನ 13:30ರಿಂದ 3ಗಂಟೆ ಒಳಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾಳೆ. ಮೃತ ಐಶ್ವರ್ಯ ತಂದೆ ಚಂದ್ರಮೌಳಿ ಇವರು ವರದಕ್ಷಿಣೆ ಕಿರುಕುಳದಡಿಯಲ್ಲಿ ದೂರು ನೀಡಿದ್ದಾರೆ. ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೋರಣಗಲ್ಲು ಉಪ ವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖುಲೆ ಇವರು ತನಿಖೆ ಕೈಗೊಂಡಿದ್ದಾರೆ. ಸಂಜೆ ಶವ ಸಂಸ್ಕಾರ ನಡೆದಿದೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 