ನೂತನ ವಿದ್ಯಾಥರ್ಿಗಳಿಗೆ ಸ್ವಾಗತ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ17 : ತಮ್ಮ ಅತ್ಯ ಅಮೂಲ್ಯವಾದ ಒಂದೊಂದು ಕ್ಷಣವನ್ನು ಅನುಭವಿಸಬೇಕು. ನೀವು ಬರಿ ಮಾತನಾಡದೆ ಸಾಧಕರಾಗಬೇಕು. ನೀವು ಮಾಡಿದ ಸಾದನೆಯನ್ನು ನೋಡಿ ಇಡಿ ಪ್ರಪಂಚದ ಜನ ಮಾತನಾಡಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಬಂಕಾಫುರ ಪಟ್ಟಣದ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ 2018/19 ನೇ ಸಾಲಿನ ನೂತನ ವಿದ್ಯಾಥರ್ಿಗಳಿಗೆ ಸ್ವಾಗತ ಹಾಗು ಪಠ್ಯೇತರ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬವ್ಯಕ್ತಿಗೂ ಚಿಂತನೆ ಇರಬೇಕು. ಆ ಚಿಂತನೆಯೊಳಗೆ ಗುರಿ ಇರಬೇಕು. ಆ ಗುರಿ ತಲುಪಲು ದಣಿವರಿಯದ ಪರಿಶ್ರಮವಿದ್ದಾಗ ಅಂತಹ ವ್ಯಕ್ತಿ ಸಾಧಕನಾಗಿ ಮೇರೆಯಬಲ್ಲ ವಿದ್ಯಾಥರ್ಿಗಳು ಸೋಲಿಗೆ ಹೆದರದೇ ಮುನ್ನಡೆದಾಗ ಗೆಲವು ನಿಮ್ಮನ್ನರಸಿ ಬರಲಿದೆ ಎಂದು ಹೇಳೀದರು.
ಮುಖ್ಯ ಅತಿಥಿಸ್ಥಾನವನ್ನು ಅಲಂಕರಿಸಿ ನಿವೃತ್ತ ಪ್ರಾಂಶುಪಾಲ ಪ್ರೋ.ಪಂಚಾಕ್ಷರಯ್ಯ ಮಾತನಾಡಿ ಸಾರ್ವತ್ರಿಕ ಬದುಕಿನ ಸಾಕ್ಷಾತ್ಕಾರಕ್ಕೆ ಜ್ಞಾನ ಸಂಸ್ಕಾರ ಅತ್ಯ ಅವಶ್ಯವಾಗಿದೆ.
ಮನುಷ್ಯ ಭೂಮಿಯ ಮೇಲಿನ ಮುಖ್ಯ ಉದ್ದೇಶವನ್ನು ಅರ್ಥಮಾಡಿಕೊಂಡು ಬದುಕಿನಲ್ಲಿ ನೀರು, ಬೆಳಕು, ಗಾಳಿ, ಪರಿಸರದಂತಹ ನೈಜ ದೈವತ್ವವನ್ನು ಉಳಿಸಿಕೊಂಡು ಹೋಗಬೇಕು. ಪ್ರತಿಯೊಬ್ಬ ಜೀವಿ ಬೌತಿಕ ಅಂಶವನ್ನು ಅರ್ಥಮಾಡಿಕೊಂಡು ಪಾರಮಾಥರ್ಿಕ ಸಾದನೆಮಾಡಿದಲ್ಲಿ ಅಂತರಂಗ, ಬಹಿರಂಗ ಶುದ್ಧಿಯಾಗಿ ಬದುಕಿನ ಸಾರ್ಥಕತೆಗೆ ಸಾದ್ಯವಾಗುತ್ತದೆ. ನಾವು ಭೂಮಿಯ ಮೇಲಿರುವ ನೈಸಗರ್ಿಕ ಸಂಪತ್ತನ್ನು ಅನಿಭವಿಸುತ್ತಿದ್ದೆವೆ ಅವುಗಳನ್ನು ಮುಂದಿನ ಪಿಳಿಗೆಗೆ ನೀಡುವ ಜವಾಬ್ದಾರಿ ನಮ್ಮ ನಿಮ್ಮೇಲ್ಲರ ಮೇಲಿದೆ ಆ ನಿಟ್ಟಿನಲ್ಲಿ ಪರಿಸರ, ಸ್ವಚ್ಛತೆಗೆ ಆದ್ಯತೆ ನೀಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಮುಖಂಡರಾದ ತಾಲೂಕಾ ಬಿಜೆಪಿ ಅದ್ಯಕ್ಷ ದೇವಣ್ಣ ಚಾಕಲಬ್ಬಿ, ಅಶೋಕ ಪಟ್ಟಣಶೆಟ್ಟರ, ಬಸವರಾಜ ನಾರಾಯಣಪುರ, ಗುಡ್ಡಪ್ಪ ಮತ್ತೂರ, ಲಿಂಗರಾಜ ಹಳವಳ್ಳಿ, ಪ್ರೋ. ಕೆ.ಪಿ.ಬೆಣಗೇರಿ, ಉಮೇಶ ಕರ್ಜಗಿ, ವಿಜಯ್ ಗುಡಗೇರಿ, ವಿಜಯಲಕ್ಷ್ಮೀ, ನಿಂಗಪ್ಪ ಕಲಕೋಟಿ, ಮಂಜುನಾಥ ನಾಯಕ, ಮೇಘರಾಜ ಚನ್ನಾಪುರ, ರಘುಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಿ.ಎಸ್.ಸೊಗಲದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುಧಾ ಹಿರೇಮಠ ಸ್ವಾಗತಿಸಿದರು. ಪ್ರೋ. ಸುಜಾತಾ ಕಡ್ಲಿ ನಿರೂಪಿಸಿದರು. ಆನಂದ ಇಂದೂರ ವಂದಿಸಿದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 