ಪ್ರಾಣಿಗಳ ದಾಹ ನೀಗಿಸಲು ಕೃತಕ ನೀರಿನ ತೊಟ್ಟಿಗಳಿಗೆ ನೀರು

ಪ್ರಾಣಿಗಳ ದಾಹ ನೀಗಿಸಲು ಕೃತಕ ನೀರಿನ ತೊಟ್ಟಿಗಳಿಗೆ ನೀರು Water for artificial water tanks to quench the thirst of animals

ಲೋಕದರ್ಶನ 

ಹೂವಿನಹಡಗಲಿ 29:  ಬಿಸಿಲಿನ ಕಾವು ದಿನೇ ದಿನೇ ಏರುತ್ತಿದ್ದು, ಅರಣ್ಯದಲ್ಲಿರುವ ಹಳ್ಳ ಕೊಳ್ಳಗಳಲ್ಲಿ ನೀರು ಬತ್ತಿರುವ ಪರಿಣಾಮ ತಾಲ್ಲೂಕಿನ ತುಂಬಿನಕೇರೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪಕ್ಷಿಗಳು,  ಕಾಡು ಪ್ರಾಣಿಗಳಿಗೆ ಕುಡಿವ ನೀರಿನ ಕೊರತೆ ಉಂಟಾಗಿದೆ. ಪ್ರಾಣಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಕೃತಕ ನೀರಿನ  ಸೀಮೆಂಟ ತೊಟ್ಟಿಗಳಿಗೆ ನೀರು ಹರಿಸುತ್ತಿದೆ.ತಾಲ್ಲೂಕಿನ ತುಂಬಿನಕೇರೆ, ಸೋಗಿ ಬೆಟ್ಟದ ಮಲ್ಲಣ್ಣ, ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿರುವ ನರಿ,ತೋಳ, ಮುಳ್ಳು ಹಂದಿ, ಚಿರತೆ ಮತ್ತ ನವಿಲು ,ಪಕ್ಷಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕೃತಕ ನೀರಿನ ತೊಟ್ಟಿಗಳನ್ನಿಟ್ಟು, ಬೈಕ್ ಮೂಲಕ ನೀರು ತುಂಬಿಸಿ ವನ್ಯ ಜೀವಿಗಳಿಗೆ ನೆರವಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷ ಬಿದ್ದ ಮಳೆಗೆ ಕೆರೆ, ಕುಂಟೆಗಳು ನೀರಿಲ್ಲದೆ ಬರಡಾಗಿವೆ. ಇದರಿಂದಾಗಿ ಕಾಡು ಪ್ರಾಣಿಗಳು ನೀರಿಗಾಗಿ ಅಲೆದಾಡುವ ಸ್ಥಿತಿ ತಲೆದೋರಿದ್ದು, ನೀರಿನ ದಾಹ ನೀಗಿಸಲು ಸಿಮೆಂಟ್ ತೊಟ್ಟಿಗಳಿಗೆ ಬೈಕ್ ಮೂಲಕ ನೀರು ಸಂಗ್ರಹಿಸುತ್ತೇವೆ ಎಂದು ಪ್ರಾದೇಶಿಕ ವಲಯ ಅರಣ್ಯ ಇಲಾಖೆ  ಅಧಿಕಾರಿ ಉಮೇಶ್ ನಾಯಕ ಪತ್ರಿಕೆಗೆ ತಿಳಿಸಿದ್ದಾರೆ