ಪತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥ

ಪತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥ Voter list revision awareness rally


ತಾಳಿಕೋಟಿ : ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಅನುದಾನಿತ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರ ಸಹಯೋಗದೊಂದಿಗೆ ಇಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ.ಪೂ.ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಯಿತು. ಕಾಲೇಜು ಚೇರಮನ್ ಎಮ್.ಆರ್.ಕತ್ತಿ ಹಾಗೂ ಪ್ರೌಢಶಾಲೆ ಚೇರಮನ್‌‌ ಎಮ್.ಸಿ.ಕತ್ತಿ ಅವರು ಚಾಲನೆ‌ ನೀಡಿದರು ಪ್ರಾಚಾರ್ಯ ಕಿಶೋರಕುಮಾರ ನೇತೃತ್ವ ವಹಿಸಿದ್ದರು. ಜಾಥಾದಲ್ಲಿ ಪ್ರೌಢಶಾಲೆ ಉಪಪ್ರಾಚಾರ್ಯ ಆರ್.ಎಸ್.ಬೂದಿಹಾಳ ಹಾಗೂ ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.