ದೌರ್ಜನ್ಯ ಜಾಗೃತಿ ಸಮಿತಿ: ಆಯ್ಕೆಯಲ್ಲಿ ಅನ್ಯಾಯ

ದೌರ್ಜನ್ಯ ಜಾಗೃತಿ ಸಮಿತಿ: ಆಯ್ಕೆಯಲ್ಲಿ ಅನ್ಯಾಯ Violence Awareness Committee: Injustice in selection

ದೌರ್ಜನ್ಯ ಜಾಗೃತಿ ಸಮಿತಿ: ಆಯ್ಕೆಯಲ್ಲಿ ಅನ್ಯಾಯ 

ಹಾವೇರಿ 06: ದೌರ್ಜನ್ಯ ಜಾಗೃತಿಯ ಜಿಲ್ಲಾ ಸಮಿತಿ ಆಯ್ಕೆಯಲ್ಲಿ ಹೋರಾಟಗಾರರಿಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ,ಸಂಸದರಾದ ಬಸವರಾಜ ಬೊಮ್ಮಾಯಿ, ಪ್ರಲ್ಲಾದ ಜೋಶಿ ಅವರಗೆ ಡಿಎಸ್‌ಎಸ್ ಮುಖಂಡ ಉಡಚಪ್ಪ ಮಾಳಗಿ ಮನವಿ ಮಾಡಿದ್ದಾರೆ. 

      ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ದೌರ್ಜನ್ಯ ವಿಚಾರದಲ್ಲಿ ಸಾಕಷ್ಟು ಹೋರಾಟಗಳನ್ನು ಕಳೆದ ಮೂರು ದಶಕದಿಂದ ಮಾಡಿಕೊಂಡು ಬಂದ ನನ್ನನ್ನು ನೇಮಕ ಮಾಡಿದೇ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅನ್ಯಾಯ ಮಾಡಿದ್ದಾರೆ. ಪ್ರಸಕ್ತ ಸಾಲಿನ ಎಸ್‌.ಸಿ.ಎಸ್‌ಟಿ ವರ್ಗಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಸಮಿತಿಗೆ ಪರಿಣಿಸಿಲು ಶಿಪಾರಸ್ಸು ಮಾಡುವಂತೆ ಒತ್ತಾಯಿಸಿದ್ದಾರೆ.ಮನವಿ ಸಲ್ಲಿಸುವ ಸಮಯದಲ್ಲಿ ಬಿಜೆಪಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ,ಮಾಜಿ ಜಿ.ಪಂ ಅಧ್ಯಕ್ಷ ಪರಮೇಶ್ವರ​‍್ಪ ಮೇಗಳಮನಿ,ನಾಗೇಂದ್ರ ಕಡಕೋಳ,ಕೆಎಂಎಪ್ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ ಸೇರಿದಂತೆ ಇತರರು ಇದ್ದರು.