ನೂತನ ಬಸ್ಗೆ ಗ್ರಾಮಸ್ಥರಿಂದ ಸ್ವಾಗತ

ನೂತನ ಬಸ್ಗೆ ಗ್ರಾಮಸ್ಥರಿಂದ ಸ್ವಾಗತ  Villagers welcome new bus

ದೇವರಹಿಪ್ಪರಗಿ 28: ಬಸವನ ಬಾಗೇವಾಡಿಯಿಂದ ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ಸಂಚರಿಸುವ ನೂತನ ಬಸ್ಗೆ ಗ್ರಾಮಸ್ಥರು ಹಾರ ಹಾಕಿ, ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಸ್ವಾಗತ ಕೋರಿದರು.  

ಬಹು ದಿನಗಳ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಇಲಾಖೆ, ಬಸವನ ಬಾಗೆವಾಡಿ - ಹೂವಿನ ಹಿಪ್ಪರಗಿ, ಕುದುರಿ ಸಾಲವಾಡಗಿ, ಯಾಳವಾರ, ಕೊಂಡಗೂಳಿ, ಕೋರವಾರ ಹಾಗೂ ಕೊಕಟನೂರ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್ ಸಂಚಾರ ಆರಂಭಿಸಿದೆ.  

ಈ ಸೇವೆ ಆರಂಭಿಸಲು ಸಹಕರಿಸಿದ ಶಾಸಕ ರಾಜುಗೌಡ ಪಾಟೀಲ ಕುಡರಿಸಲವಾಡಗಿ ಹಾಗೂ ವಿಜಯಪುರ ವಿಭಾಗದ ಸಾರಿಗೆ ಅಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ನೂತನ ಬಸ್ ಸೇವೆಯಿಂದ ವಿದ್ಯಾರ್ಥಿಗಳು, ರೈತರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಶಿವು ಕೊಳ್ಳಾರಿ, ಬಾಬು ನದಾಫ್, ಉಮೇಶ ಹಣ್ಣಿ, ಕಾಸಿಲಿಂಗ ಸಿಂದಗೇರಿ, ಅಕ್ಷಯ ಗೊಬ್ಬರ, ಕಲ್ಲು ಅವರಾದಿ, ಶಿವಾನಂದ ಗೊಬ್ಬರ, ಮಹಿಬೂಬ ಖಾಜಿ, ಮುನೀರ್ ನದಾಫ್, ಬಸವಲಿಂಗಯ್ಯ ಹಿರೇಮಠ, ಬಸವರಾಜ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.