ಬಣ್ಣ ಎರಚಾಡುವ ಮೂಲಕ ಹೋಳಿ ಸಂಭ್ರಮಿಸಿದ ಗ್ರಾಮಸ್ಥರು
Villagers celebrated Holi by throwing colors
ಲೋಕದರ್ಶನ ವರದಿ
ಬಣ್ಣ ಎರಚಾಡುವ ಮೂಲಕ ಹೋಳಿ ಸಂಭ್ರಮಿಸಿದ ಗ್ರಾಮಸ್ಥರು
ಶಿಗ್ಗಾವಿ : ಪಟ್ಟಣದಲ್ಲಿರಂಗಿನ ಹಬ್ಬ ಹೋಳಿ ಹುಣ್ಣಿಮೆಯನ್ನು ಯುವಕರು,ಮಹಿಳೆಯರು, ಚಿಣ್ಣರು ಪರಸ್ಪರ ಬಣ್ಣಎರಚಿ ಸಂಭ್ರಮಿಸಿದರು.
ಶಿಗ್ಗಾವಿಯ ಐತಿಹಾಸಿಕ ಕಾಮಣ್ಣನಕಟ್ಟೆ, ಚೌಡಿಕಟ್ಟೆ, ಹಳೆ ಪೇಟೆಯಗಣೇಶನಕಟ್ಟೆ, ಜೋಳದ ಪೇಟೆ, ಜಯನಗರ ಬಳಿ ಪ್ರತಿಷ್ಟಾಪನೆ ಮಾಡಿದ್ದಕಾಮಣ್ಣನನ್ನು ಬೆಳಿಗ್ಗೆ 6 ಗಂಟೆಗೆ ಹಿರಿಯರ ಸಮ್ಮುಖದಲ್ಲಿ ವಿಶೇಷ ಪೂಜೆ, ವಾದ್ಯಮೇಳದೊಂದಿಗೆ ದಹಿಸಲಾಯಿತು.
ಐತಿಹಾಸಿಕ ಕಾಮಣ್ಣನಕಟ್ಟೆ ಬಳಿ ಪ್ರತಿಷ್ಟಾಪನೆ ಮಾಡಿದ್ದಕಾಮಣ್ಣನ ಮೂರ್ತಿಯನ್ನು ಮೊದಲು ದಹಿಸಿದ ನಂತರ, ಅಲ್ಲಿನ ಬೆಂಕಿಯಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣನ ಮೂರ್ತಿಗಳನ್ನು ದಹಿಸುವು ಮೂಲಕ ಪೂರ್ವಜರ ಹಬ್ಬದ ಸಂಪ್ರದಾಯ ಮುಂದುವರಿಸಿದರು.
ಹೋಳಿ ಹಬ್ಬದಲ್ಲಿಯುವಕರ ಮತ್ತುಚಿಣ್ಣರಅಬ್ಬರಜೋರಾಗಿತ್ತು. ಪರಸ್ಪರ ಬಣ್ಣಎರಚಿಡಿಜೆ ಹಾಡಿಗೆಕುಣಿದು ಸಂಭ್ರಮಿಸಿದರು.ಬೈಕ್ಗಳಲ್ಲಿ ಹಲಗೆ ಬಾರಿಸುತ್ತ ಗುಂಪುಗಳಾಗಿ ಸಂಚರಿಸಿ, ಕೆಲವು ಯುವಕರುತಲೆಗೆ ಮೊಟ್ಟೆ ಸಿಡಿಸಿ ಹಬ್ಬ ಆಚರಿಸಿದರು.
ಭಾಕ್ಸ ಸುದ್ದಿ : ಪಟ್ಟಣದ ಜೋಳದ ಪೇಟೆಯ ಮಹಿಳೆಯರು ಬಣ್ಣದ ಮಡಿಕೆ ಹೊಡೆಯುವಲ್ಲಿ ಸಂಜನಾರಾಯ್ಕರ, ರೂಪಾ ಬಗಾಡೆ, ವಿದ್ಯಾ ಮುಂಡಗೋಡ, ಕಾವ್ಯ ಬಗಾಡೆ, ರೂಪಾ, ಸುನಂದಾಗಂಟಿ, ಅನಿತಾ ಉಳ್ಳಟ್ಟಿ ಸೇರಿದಂತೆಇತರರು ಆಚರಿಸಿದರು.
ಬಣ್ಣದಲ್ಲಿ ಮಿಂದೆದ್ದಚಿಣ್ಣರು, ಯುವಕರು ವಿವಿಧ ವೇಷಗಳನ್ನು ಧರಿಸಿ ಅಣಕು ಶವಯಾತ್ರೆ ನಡೆಸಿದರು.ಬಾಯಿ ಬಡಿದುಕೊಳ್ಳುತ್ತ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹೋಳಿ ಸಂಭ್ರಮ ಪಟ್ಟಣದಲ್ಲಿ ಸುಡು ಬಿಸಿಲ ನಡುವೆಯೂ ಸಂಭ್ರಮದಿಂದ ಆಚರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 